ತೊಗರಿ ಬೆಳೆ ಹಾನಿಯಾಗಿದ್ದು, ರೈತರಿಗೆ ವಿಮಾ ಕಂಪನಿ ಪರಿಹಾರ ನೀಡ ಬೇಕೆಂದು ಕರವೇ ಇಂಡಿ ತಾಲೂಕಾ ಪದಾಧಿಕಾರಿಗಳು ಇಂಡಿ ಕೃಷಿ ಅಧಿಕಾರಿಗಳಾದ ಮಹಾಂತೇಶ ಶಟ್ಟೆನವರ ಅವರಿಗೆ ಮನವಿ
ಇಂಡಿ. ತೊಗರಿ ಬೆಳೆ ಹಾನಿಯಾಗಿದ್ದು, ರೈತರಿಗೆ ವಿಮಾ ಕಂಪನಿ ಪರಿಹಾರ ನೀಡ ಬೇಕೆಂದು ಕರವೇ ಇಂಡಿ ತಾಲೂಕಾ ಪದಾಧಿಕಾರಿಗಳು ಇಂಡಿ ಕೃಷಿ ಅಧಿಕಾರಿಗಳಾದ ಮಹಾಂತೇಶ ಶಟ್ಟೆನವರ ಅವರಿಗೆ ಮನವಿ ಸಲ್ಲಿಸಿ ಅಗ್ರಹಿಸಿದ್ದರು.
ಈ ಸಂದರ್ಭದಲ್ಲಿ ಕರವೇ ತಾಲೂಕಾ ಅಧ್ಯಕ್ಷರಾದ ಬಾಳು ಮುಳಜಿ, ಮಾತನಾಡಿ ಮುಂಗಾರು ತೊಗರಿ ಬೆಳೆ ಇಂಡಿ ತಾಲೂಕಿನಲ್ಲಿ ಶೇ 90 ರಷ್ಟು ತೊಗರಿ ಬೆಳೆ ನಷ್ಟ ಆಗಿರುತ್ತದೆ. ನಮ್ಮ ತಾಲೂಕಿನ ರೈತರು ಕಂಗಾಲ ಆಗಿದ್ದಾರೆ. ತೀವ್ರ ಸಂಕಷ್ಟದಲ್ಲಿದ್ದಾರೆ ಸರ್ಕಾರ ನಮ್ಮ ತಾಲೂಕಿನಲ್ಲಿ ತೊಗರಿ ಬೆಳೆ ಬಗ್ಗೆ ಸಮಗ್ರ ಸರ್ವೆ ನಡೆಸಿ ಸರ್ಕಾರಕ್ಕೆ ಸಂಪೂರ್ಣ ವರದಿ ಸಲ್ಲಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ನಮ್ಮ ತಾಲ್ಲೂಕು 35 ವರ್ಷಗಳಿಂದ ಬೀಕರ ಬರಗಾಲ ಆವರಿಸಿದ್ದು, ಈ ವರ್ಷ ಒಳ್ಳೆ ಮಳೆಯಾಗಿದ್ದು, ರೈತರು ತಮ್ಮ ಹೊಲಗಳಿಗೆ ಸಾಲ ಮಾಡಿ ಕೃಷಿ ಉತ್ಪನ ಬರುತದೆ ಅವಲಬಿಂತರಾಗಿದ್ದು, ಇಂತಹ ಸಮಯದಲ್ಲಿ ತೊಗರಿ ಬೆಳೆ ಕೈ ಕೊಟ್ಟಿದ್ದು, ರೈತರ ಕಂಗಾಲ ಆಗಿದ್ದಾರೆ ರೈತರು ತೊಗರಿ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಖರೀದಿಸಿ ಬೀತ್ತನೆ ಮಾಡಿದ್ದಾರೆ. ಕಳಪೆ ಗುಣಮಟ್ಟದ ಬೀಜ ವಿತರಿಸಿದರಿಂದ ತೊಗರಿ ಬೆಳೆ ಹೂವು ಉದುರಿ ಕಾಳುಕಟ್ಟಾಗಿದೆ ಸಂಪೂರ್ಣ ತೊಗರಿ ಬೀಜದಿಂದಾಗಿದ್ದು, ಹಾಗೂ ರೋಗ ಬಂದಿದ್ದು ಅದರಿಂದ ರೈತರ ಬದುಕು ಕಷ್ಟದಲ್ಲಿದೆ ನಮ್ಮ ಇಂಡಿ ತಾಲೂಕಿನಲ್ಲಿ ಸಂಪೂರ್ಣ ಎಲ್ಲಾ ಜಮೀನುಗಳಿಗೆ ತೆರಳಿ ಆದ ನಷ್ಟವನ್ನು ಬೆಳೆಗಳ ವಿಮಾ ಕಂಪನಿಂದ ಹಾಗೂ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು ಎಂದು.
ಮಹೇಶ ಹೂಗಾರ ಮಾತನಾಡಿ ವಿಮಾ ಕಂಪನಿಗಳು ನಮ್ಮ ತಾಲೂಕಿಗೆ ಪ್ರತಿ ವರ್ಷ ಅನ್ಯಾಯ ಆಗುತ್ತಾ ಬಂದಿದೆ. ಸರ್ಕಾರ ಬೆಳೆ ಪರಿಹಾರ ಹಾಗೂ ವಿಮಾ ಕಂಪನಿಯಿಂದ ಪರಿಹಾರ ಕೂಡಿಸಬೇಕು ತೊಗರಿಯ ವಿಮಾ ಮೊತ್ತ 1 ಹೇಕ್ಟರ 48564 ಪರಿಹಾರ ನೀಡಬೇಕು ಎಂದು ವಿಮಾ ಕಂಪನಿಗಳು ಆದೇಶವಿದ್ದು. ಅವರು ತಮ್ಮ ಮನಸ್ಸಿಗೆ ಬಂದಂತೆ ಪರಿಹಾರ ನೀಡುತ್ತಾರೆ. ಇದನ್ನು ಕರವೇ ವೇದಿಕೆ ಖಂಡಿಸುತ್ತದೆ. ನಮ್ಮ ತಾಲೂಕಿನಲ್ಲಿ ಪ್ರತಿಶಥ ಶೇ 70 ರಷ್ಟು ತೊಗರಿ ಬೆಳೆ ಬೆಳೆದಿದ್ದು ರೈತರು ಈ ಬೆಳೆಯನ್ನು ನಂಬಿ ಮದುವೆ ಇತರೆ ಶುಭ ಸಮಾರಂಭಗಳನ್ನು ಆಯೋಜನೆ ಮಾಡಿದ್ದು ಅವರಿಗೆ ದಿಕ್ಕು ತೂಚದಂತೆ ಆಗಿದೆ. ನಮ್ಮ ಇಂಡಿ ತಾಲೂಕಿನ ಕೃಷಿ ಅಧಿಕಾರಿಗಳು ಪ್ರತಿ ಹಳ್ಳಿಗಳ ಜಮೀನುಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಸರ್ಕಾರ ರೈತರ ಸಂಕಷ್ಟಕ್ಕೆ ಬೇಗನೆ ಬರಬೇಕು ಎಂದು ಕರವೇ ಆಗ್ರಹಿಸುತ್ತದೆ. ಇಲ್ಲದಿದ್ದರೆ ಮಿನಿ ವಿಧಾನ ಸೌಧ ಕಛೇರಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ಹೇಳಿದರು.
ರಾಜು ಕುಲಕರ್ಣಿ, ಮಂಜು ದೇವರ, ಅಶೋಕ ಅಕಲಾದಿ, ಮೈಬು ಬೇನೂರ, ಸಚೀನ ನಾವಿ, ಸುನೀಲ ಹಿರೇಮಠ, ಶಿವಾನಂದ ಮಡಿವಾಳ, ಪ್ರಶಾಂತ ಲಾಳಸಂಗಿ, ಅರುಣ ಕಂಬಾರ, ಬಾಗೇಶ ಹಡಪದ, ಶ್ರೀದರ ವಾಲಿ, ಅಪ್ಪು ಚಂಡಕಿ, ಶಾಂತು ಲಾಳಸಂಗಿ, ಮಹಾವೀರ ಕಾಮನಕೇರಿ, ಲೋಕೆಶ ಬಾಮನೆ, ಪವನ ಪರಗೂಂಡ, ಶಿವು ಅಗಸರ, ನಾಗಾರಾಜ ಚಾಬುಕಸೂರ ,ಅಣ್ಣಾರಾಯ ವಾಲಿ, ಕರವೇ ಪ್ರಮುಖ ಪದಾಧಿಕಾರಿಗಳು ಹಾಜರಿದ್ದರು.



ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ