ಶಿಕ್ಷಕರ ಆಂತರಿಕ ಪ್ರೇರಣೆ ಮತ್ತು ವೃತ್ತಿಪರ ಕೌಶಲ ಹೆಚ್ಚಿಸುವಲ್ಲಿ ಸಮಾಲೋಚನಾ ಸಭೆ ತುಂಬಾ ಸಹಕಾರಿ.ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲ್ಗೂರ

 ಇಂಡಿ. ಶಿಕ್ಷಕರ ಆಂತರಿಕ ಪ್ರೇರಣೆ ಮತ್ತು ವೃತ್ತಿಪರ ಕೌಶಲ ಹೆಚ್ಚಿಸುವಲ್ಲಿ ಸಮಾಲೋಚನಾ ಸಭೆ ತುಂಬಾ ಸಹಕಾರಿ. ಸಮಾಲೋಚನಾ ಸಭೆಗಳು ಮಕ್ಕಳ ಕಲಿಕೆ ಪ್ರೇರೇಪಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲ್ಗೂರ  ಹೇಳಿದರು.

ಪಟ್ಟಣದ ಸರಕಾರಿ ಉರ್ದು ಗಂಡ ಮಕ್ಕಳ ಶಾಲೆಯಲ್ಲಿ ಆಶ್ರಯ ಕಾಲೋನಿಯಲ್ಲಿ  ನಡೆದ ಮೂರರಿಂದ ಐದನೇ ತರಗತಿ ಬೋಧಿಸುತ್ತಿರುವ ಶಿಕ್ಷಕರ ಸಮಾಲೋಚನೆ ಸಭೆ ಉದ್ಘಾಟಸಿ ಹಾಗೂ  ಜುಲೈ 2024 ರಿಂದ ಜನವರಿ 2025ರ ವರೆಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದ ಶಿಕ್ಷಕರಿಗೆ ಸನ್ಮಾನಿಸಿ ಮಾತನಾಡಿದ ಅವರು   ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ತರಬೇತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಎಲ್ಲಾ ಹಂತದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತೇವೆ. ಶಿಕ್ಷಕರು ಸಮಾಲೋಚನೆ ಸಭೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. 


ಮಕ್ಕಳು ದಿನನಿತ್ಯ ಚಟುವಟಿಕೆಗಳಲ್ಲಿ ತೊಡುಗುವ ಮೂಲಕ ಕಲಿಕೆಯನ್ನು ಸಾಧಿಸಲು ನಿರಂತರ ಪ್ರಯತ್ನ ನಡೆದಿದೆ. ತರಗತಿ ಅಭಿವೃದ್ಧಿ ಮಾಡುವುದು ,ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡುವುದು ಆದ್ಯ ಕರ್ತವ್ಯವಾಗಿದೆ. ಶಿಕ್ಷಕರಿಗೆ ಬೋಧನೆಯಲ್ಲಿ ಬರುವ ತೊಂದರೆಗಳು ಸಮಸ್ಯೆ ನಿವಾರಿಸಿಕೊಳ್ಳಲು ಸಮಾಲೋಚನಾ ಸಭೆ ಸಹಕಾರಿಯಾಗಲಿದೆ ಎಂದ ತಿಳಿಸಿದರು.

ಈ ಸಂದರ್ಭದಲ್ಲಿ , ಕ್ಷೇತ್ರ ಸಮನ್ವಾಯ ಅಧಿಕಾರಿಗಳು ಎಸ್. ಆರ್. ನಡುಗಡ್ಡಿ, ಬಿ ಆರ್ ಪಿ ಗಳಾದ ಎ. ಜಿ. ಚೌದ್ರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಅಲ್ತಾಫ್ ಬೋರಾಮಣಿ, ಇಂಡಿ ಸಿಆರ್‌ಪಿ  ಪರವೇಜ ಅಹಮದ್  ಪಟೇಲ್, ಸಾತಲಗಂವ  ಸಿ ಆರ್ ಪಿ ಇಲಾಹಿ  ಸಿಕ್ಕಲ್ಗಾರ್,  ಮತ್ತು ಇಂಗಳಗಿ  ಸಿಆರ್‌ಪಿ ಭಾಷಾ ಕುಮಸಗಿ ಉಪಸ್ಥಿತ ಇದ್ದರು.


 ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ  ಸನ್ಮಾನಿಸಲಾಯಿತು.  ಅತಿಕಾ ಮಾಣಿಕಪುರಿ,  ನಾಜಿಯಾ ಕಲಾದಗಿ, ನಸ್ರಿನ ಬಾನು ತುರ್ಕಿ, ಶಬಾನ ಅತ್ತಾರ್,  ಶಾಹಿಸ್ತಾ ಉಕ್ಕಲಿ, ಫಯಾಜ್ ಅಹ್ಮದ್ ಚೌದರಿ,  ಎಂ. ಡಿ. ಹೆಬ್ಬಾಳ, ಸರಕಾರಿ ನೌಕರರ ಸಂಘದ ನಿರ್ದೇಶಕ  ಅಬುತಾಲಿಬ್ ಹೊಸೂರ್, ಎಂ. ಎಂ. ಅರಬ್ ನಿವೃತ್ತ ಶಿಕ್ಷಕರು ಇವರನ್ನು ಸನ್ಮಾನಿಸಲಾಯಿತು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು