ಮಕ್ಕಳ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಪೋಷಕರು ಮತ್ತು ಶಿಕ್ಷಕರ ಪ್ರಮುಖ ಜವಾಬ್ದಾರಿ. ಅಬೀದ ಗದ್ಯಾಳ
ಇಂಡಿ. ಉಮ್ಮೆ ಸುಲೇಮ್ ಮಸೀದಿ ಮತ್ತು ಮದರಸಾ ವತಿಯಿಂದ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸಮಾರಂಭವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಇಂಡಿ ಉಪ ವಿಭಾಗಾಧಿಕಾರಿಗಳಾದ ಆಭೀದ ಗದ್ಯಾಳ ಅವರು ಮಾತನಾಡಿ, "ಇಂದಿನ ಯುಗದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಸರಿಯಾದ ದಾರಿಯನ್ನು ತೋರಿಸುವುದು ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಅತ್ಯಗತ್ಯ. "ಮಕ್ಕಳ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಪೋಷಕರು ಮತ್ತು ಶಿಕ್ಷಕರ ಪ್ರಮುಖ ಜವಾಬ್ದಾರಿ, ಏಕೆಂದರೆ ಶಿಕ್ಷಣಯುಕ್ತ ಸಮಾಜವೊಂದೇ ಪ್ರಗತಿಯ ದಾರಿಯಲ್ಲಿ ಸಾಗಲು ಸಾಧ್ಯ" ಎಂದರು ಹೇಳಿದರು.
ಈ ಸಂದರ್ಭ ಮೌಲಾನಾ ನೂರುದ್ದೀನ್ ಉಮರಿ ಅವರು ವಿದ್ಯಾರ್ಥಿಗಳ ಶಿಸ್ತುಬದ್ಧ ಜೀವನ ಮತ್ತು ಶಿಕ್ಷಕರ ಗೌರವದ ಮಹತ್ವದ ಕುರಿತು ಮಾತನಾಡಿದರು. "ಯಶಸ್ಸಿಗಾಗಿ ಕೇವಲ ಶೈಕ್ಷಣಿಕ ಪ್ರಗತಿಯೇ ಸಾಕಾಗದು ನೈತಿಕ ಬೆಳೆಸುವಿಕೆಯೂ ಮುಖ್ಯವಾಗಿದೆ. ಶಿಕ್ಷಕರ ಗೌರವಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಜವಾಬ್ದಾರಿ, ಏಕೆಂದರೆ ಒಬ್ಬ ಉತ್ತಮ ಶಿಕ್ಷಕವೇ ಉತ್ತಮ ಪೀಳಿಗೆ ನಿರ್ಮಿಸಬಲ್ಲನು.
ಈ ಸಮಾರಂಭದಲ್ಲಿ ಹಾಫಿಝ್, ಡಾಕ್ಟರ್, ಇಂಜಿನಿಯರ್ ಆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪೋಷಕರು, ಶಿಕ್ಷಕರು ಮತ್ತು ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಭವಿಷ್ಯದ ಬೆಳವಣಿಗೆಗೆ ಸಹಕಾರಿ ಹೆಜ್ಜೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮಕ್ಕೆ ಮೌಲಾನಾ ತಾಹಿರ್ ಬೇಗ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮೌಲಾನಾ ಅಬ್ದುಲ್ ರಹೀಂ ಸಗ್ರಿ, ಮೌಲಾನಾ ಡಿ.ಎಂ. ಅಹ್ಮದ್ ಸಾಬ್ ಉಮರಿ, ಮೌಲಾನಾ ಅಬ್ದುಲ್ ಜಬ್ಬಾರ್ ಉಮರಿ, ಗುಮ್ಮಟ ನಗರಿ ಪತ್ರಿಕೆಯ ಸಂಪಾದಕ ಇರ್ಫಾನ್ ಶೇಖ್, ಪುರಸಭೆ ಉಪಾಧ್ಯಕ್ಷ ಜಹಾಂಗೀರ್ ಸೌದಾಗರ್, ಸತ್ತಾರ್ ಭಾಗವಾನ್, ಜಬ್ಬಾರ್ ಅಣ್ಣಾ ಅರಬ್, ಮಹಮ್ಮದ್ ಬೇಪಾರಿ, ಹಾಫಿಝ್ ಸಿದ್ದೀಕಿ, ಯಾಕೂಬ್ ಮಾಶಳ್ಕರ್, ಅಂಜುಮನ್ ಕಾರ್ಯದರ್ಶಿ ಜಮಾದಾರ್ ಸರ್, ಯಾಕೂಬ್ ನಾಟೀಕರ, ಅಸ್ಲಂ ಪಟೇಲ್, ಪುರಸಭೆ ಸದಸ್ಯ ಮುಸ್ತಾಕ್ ಇಂಡಿಕರ್ ಮತ್ತು ಅನೇಕ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಮೌಲಾನಾ ಝಿಯಾಉಲ್ ಹಕ್ ಉಮರಿ ನೇಸಾಮತ್ ವಹಿಸಿದರು ಮತ್ತು ಮೌಲಾನಾ ಮುಖ್ತಾರ್ ಉಮರಿ ಧನ್ಯವಾದಗಳನ್ನು ಅರ್ಪಿಸಿದರು.





ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ