ಇಂಗಳಗಿ ಗ್ರಾಮದ ಶ್ರೀ ಅಲ್ಲಮಪ್ರಭು ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ವಿವಿದ್ಯೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರಿ ಸಂಘ ನಿ, ಇದರ ವಾರ್ಷಿಕ ಸರ್ವಸಾಧಾರಣ ಮಹಾಸಭೆ
ಇಂಡಿ: ಹಾನಿಯಲ್ಲಿ ಇದ್ದ ನಮ್ಮ ಸಂಘವು ಇಂದು ಸುಮಾರು ೫ ಲಕ್ಷ ರೂಪಾಯಿ ಲಾಭದಲ್ಲಿ ಸಾಗೂತ್ತಿದ್ದು ಇದಕ್ಕೆ ರೈತರ ಹಾಗೂ ಗ್ರಾಹಕರ ಸಹಕಾರವೇ ಕಾರಣ. ಆದ್ದರಿಂದ ಖಟ್ಟ ಬಾಕಿದಾರರು ಸಕಾಲಕ್ಕೆ ತಮ್ಮ ಸಾಲವನ್ನು ಮರು ಪಾವತಿಸಿದ್ದಲ್ಲಿ ಇನ್ನಷ್ಟು ಲಾಭವಾಗಲಿದೆ ಎಂದು ಪಿಕೆಪಿಎಸ್ ಅಧ್ಯಕ್ಷ ಪ್ರಭು ಹೊಸಮನಿ ಹೇಳಿದರು. ಅವರು ತಾಲೂಕಿನ ಇಂಗಳಗಿ ಗ್ರಾಮದ ಶ್ರೀ ಅಲ್ಲಮಪ್ರಭು ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ವಿವಿದ್ಯೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರಿ ಸಂಘ ನಿ, ಇದರ ವಾರ್ಷಿಕ ಸರ್ವಸಾಧಾರಣ ಮಹಾಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡಿದರು. ಈ ಸಂಘವು ರೈತರ ಆಸ್ತಿ ಇದನ್ನು ಉಳಿಸಿ ಬೆಳೆಸಿಕೊಂಡು ಹೊಗುವುದು ಪ್ರತಿಯೊಬ್ಬರ ಜಾವಾಬ್ದಾರಿಯಾಗಿದೆ. ಆದ್ದರಿಂದ ಗ್ರಾಹಕರು ತೆಗೆದುಕೊಂಡ ಸಾಲ ಇನ್ನೂ ಲಕ್ಷಾಂತರ ರೂಪಾಯಿ ಇದೆ. ಆದ್ದರಿಂದ ತ್ವರಿತವಾಗಿ ಸಾಲ ಮರು ಪಾವತಿ ಮಾಡಿ ಮರಳಿ ಸಾಲ ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ. ಆದಷ್ಟು ಬೇಗ ತಮ್ಮ ಸಾಲ ತುಂಬಲು ಮುಂದಾಗಿ ಒಂದು ವೇಳೆ ತುಂಬಲು ಹಿಂದೆಟು ಹಾಕಿದಲ್ಲಿ ಕಾನೂ ಕ್ರಮ ಜರುಗಿಸಬೇಕಾಗುತ್ತದೆ ಎಂದರು. ಪಿಕೆಪಿಎಸ್ ಪ್ರಭಾರಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಷ್ಣು.ಜಿ.ವಾಘಮೋಡೆ ವಾರ್ಷಿಕ ವರದಿ ವಾಚಿಸಿದರು. ನಿರ್ದೇಶಕರಾದ ವಜ್ರಕಾಂತ ಹೂಗಾರ, ಅರ್ಜುನ ಜಾಧವ, ಅಶೋಕ ಬಳಬಟ್ಟಿ, ಹಣಮಂತ ಸೊಲಂಕಾರ, ಸದಾಶಿವ ಅಹಿರಸಂಗ, ಹಣಮಂತ ಬನಸೋಡೆ, ಶಿವು ಪೂಜಾರಿ, ಮುತ್ತಪ್ಪ ಸಂಗ...