Your voice
ಇಂಡಿ. ಸಿಂದಗಿ ರಸ್ತೆ ಬಸವೇಶ್ವರ ಸರ್ಕಲ್ ದಿಂದ ಶಾಂತೇಶ್ವರ ಮಂಗಲ ಕಾರ್ಯಾಲಯದ ವರೆಗೆ ನಡೆದ ಸಿ ಸಿ ಚರಂಡಿ ಹಾಗೂ ಫೋಟ್ಟ ಪಾತ ನಿರ್ಮಾಣ ಕಾಮಗಾರಿ ಕಳಪೆ ಮಟ್ಟದಾಗಿದ್ದು ಕೂಡಲೆ ಥರ್ಡ್ ಪಾರ್ಟಿ ತಪಾಸಣೆ ಮಾಡಬೇಕು ಎಂದು ಪುರಸಭೆ ವಾರ್ಡ ನಂ 13 ಸದಸ್ಯರಾದ ಅನಿಲಗೌಡ ಬಿರಾದಾರ ಆಗ್ರಹಿಸಿದ್ದಾರೆ.
ಪಟ್ಟಿಯಲ್ಲಿ ಸಿಂದಗಿ ರಸ್ತೆಯಲ್ಲಿ ನಡೆಯುತ್ತಿರುವ ಸಿ.ಸಿ.ಚರಂಡಿ ಹಾಗೂ ಫೋಟ ಪಾತ ಸಂಪೂರ್ಣ ಕಳಪೆಮಟ್ಟದಾಗಿದೆ ಯೋಜನಾ ವರದಿ ಪ್ರಕಾರ ಕಬ್ಬಿಣ ರಾಡಗಳ ಅಳತೆ ಅಳವಡಿಸಿಲ್ಲಾ. ಕಾಂಕ್ರೀಟ್ ಸೈಜ ಸರಿಯಾಗಿ ಇಲ್ಲ, ಕಳಪೆ ಮಟ್ಟದಾಗಿದೆ. ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೆ ಪ್ರಯೋಜನ ವಾಗಿಲ್ಲ. ಅಧಿಕಾರಿಗಳು ಹಾಗೂ ಕೂಡಿಕೊಂಡು ತಮ್ಮ ಅನುಕೂಲವಾಗುವ ಹಾಗೆ ಕಾಮಗಾರಿ ಮುಂದೆವರೆಸಿದ್ದಾರೆ. ಸಹಾಯ ಇಂಜಿನಿಯರ ಗಮನಕ್ಕೆ ತಂದಿದ್ದರು ಪ್ರಯೋಜನವಾಗಿಲ್ಲಾ. ಕೂಡಲೆ ಕಾಮಗಾರಿಯನ್ನು ಸ್ಥಗಿತ ಗೊಳಿಸಿ ಥರ್ಡ್ ಪಾರ್ಟಿ ಪರಿಶೀಲನೆ ಆಗುವವರೆಗೆ ಕಾಮಗಾರಿ ಬಿಲ್ಲು ತಡೆಹಿಡಿಯಬೇಕು. ಕಾಮಗಾರಿಯನ್ನು ವಾರ್ಡಿನ ಸದಸ್ಯರ ಸಮ್ಮುಖದಲ್ಲಿ ಪರಿಶೀಲನೆಮಾಡಿ ಥರ್ಡ್ ಪಾರ್ಟಿ ವರದಿ ನೀಡಬೇಕು ಎಂದು ಆಗ್ರಹಿಸಿ ಪಿಡೆಬ್ಲೋಡಿ ಅಧಿಕಾರಿಗಾಳಾದ ಬಿಜಾಪುರ, ಬೆಳಗಾವಿ, ಹಾಗೂ ದಾರ್ವಾಡ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾಗಿ ತಿಳಿಸಿದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ