Your voice
*
![]() |
ಇಂಡಿ. ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿಗೆ ಇಂಡಿ ಪಟ್ಟಣದ ನಿಂಬೆ ಬೆಳೆಗಾರರು ಹಾಗೂ ಶರಣ ದಂಪತಿಗಳಾದ ಶ್ರೀಶೈಲ ಸಿದ್ದಪ್ಪ ಹಂಜಗಿ ಹಾಗೂ ಕಾಶಿಬಾಯಿ ಶ್ರೀಶೈಲ ಹಂಜಗಿ ಅವರು ತಮ್ಮ ಮನೆತನದ ಹಿರಿಯರಾದ ಲಿಂ.ಗುರಪ್ಪ ಶಿವಲಿಂಗಪ್ಪ ಹಂಜಗಿ ಹಾಗೂ ಲಿಂ. ಕಲಾವತಿ ಗುರಪ್ಪ ಹಂಜಗಿ ಇವರ ಸ್ಮರಣಾರ್ಥ 25,000 ರೂ.ಗಳ ದತ್ತಿ ದಾನ ಪತ್ರಕ್ಕೆ ರುಜು ಹಾಕಿ,ಚೆಕ್ಕನ್ನು ನೀಡಿ, ದಾನ ಪತ್ರವನ್ನು ಅವರ ಸ್ವಗೃಹದಲ್ಲಿ ಶಸಾಪ ಅಧ್ಯಕ್ಷರಾದ ಎಂ ಪಿ ಭೈರಜಿ ಅವರಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಕದಳಿ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಗಂಗೂಬಾಯಿ ಚ ಗಲಗಲಿ, ಕಜಾಪ ತಾಲೂಕಾ ಅಧ್ಯಕ್ಷ ಆರ್ ವ್ಹಿ ಪಾಟೀಲ,ಶಸಾಪ ಉಪಾಧ್ಯಕ್ಷ ಜಿ ಜಿ ಬರಡೋಲ, ಗೌರವ ಕಾರ್ಯದರ್ಶಿ ಸಿ ಆರ್ ಮ್ಯಾಕೇರಿ ಖಜಾಂಚಿ ಎಸ್ ಐ ಸುಗೂರ, ಸಂಘಟನಾ ಕಾರ್ಯದರ್ಶಿ ಎನ್ ಎಲ್ ಹಚಡದ,ದತ್ತಿ ಸಂಚಾಲಕ ರಾಜು ಹೂಗಾರ,ಕದಳಿ ವೇದಿಕೆಯ ಸದಸ್ಯರಾದ ಶೋಭಾ ಅಣ್ಣಾರಾವ ಪಾಟೀಲ ಸುಮಂಗಲಾ ಕೋಷ್ಠಿ ಉಪಸ್ಥಿತರಿದ್ದರು.*

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ