ಕಾಖಾ೯ನೆಯಿಂದ ರೈತರಿಗಾಗುವ ಸಮಸ್ಯೆ ಬಗೆಹರಿಸುವಂತೆ ಸಿ.ಇ.ಒ ಅವರಿಗೆ ಮನವಿ.
ಕಾಖಾ೯ನೆಯಿಂದ ರೈತರಿಗಾಗುವ ಸಮಸ್ಯೆ ಬಗೆಹರಿಸುವಂತೆ ಸಿ.ಇ.ಒ ಅವರಿಗೆ ಮನವಿ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮ ವ್ಯಾಪ್ತಿಗೆ ಸಂಬಂಧಿಸಿದ ಜಮಖಂಡಿ ಸುಗರ್ ಕಾರ್ಖಾನೆಯ ಅನೇಕ ಸಮಸ್ಯೆಗಳಿಂದ ಬೇಸತ್ತು ರೈತರು ಕಾರ್ಖಾನೆ ಪ್ರಾರಂಭದ ತಳಹದಿಯಿಂದಲೂ ಸುತ್ತ ಮುತ್ತಲಿನ ರೈತರ ಜಮೀನುಗಳ ಬೆಳೆ, ಆರೋಗ್ಯ,ಸಾಕು ಪ್ರಾಣಿಗಳ ಮೇಲೆ ಕಾಖಾ೯ನೆ ಧೊಳಿನಿಂದಾಗಿ ,ರಸ್ತೆಗಳ ಅವ್ಯವಸ್ಥೆ,ಹಿಗೆ ಅನೇಕ ಸಮಸ್ಯೆಗಳಿಂದ ನೊಂದ ರೈತರು ಸಂಬಂಧಿಸಿದ ಕಾಖಾ೯ನೆಯ ಅಧಿಕಾರಿಗಳ ಗಮನಕ್ಕೂ ತಂದರು ಇನ್ನೂವರೆಗೆ ಯಾವುದೇ ಸಮಸ್ಯ ಬಗೆಹರಿದಿರುವುದಿಲ್ಲ ಇಂತಹ ದುಷ್ಪರಿಣಾಮ ಕುರಿತು ಸರ್ಕಾರ ಈ ಕಾಖಾ೯ನೆ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಬೇಕು.ರೈತರಿಗಾಗುವ ಸಮಸ್ಯೆಗಳನ್ನು ಬಗೆಹರಿಸಬೇಕು.
ಕಾಖಾ೯ನೆಗೆ ಸಂಬಂಧಿಸಿದ ರಸ್ತೆಗಳ ಕುರಿತು ಮಾಲಿಕರಿಗೆ ನೋಟಿಸ್ ಜಾರಿಗೊಳಿಸಬೇಕು.ಕಾಮಿ೯ಕರಿಗೆ ಸಿಗುವ ಸರ್ಕಾರದ ಕಾಯ್ದೆ ಪ್ರಕಾರ ಕನಿಷ್ಠ ವೇತನ ಪ್ರತಿಯೊಬ್ಬರಿಗು ಸಿಗುವಂತಾಗಬೇಕು.ಶಬ್ದ ಮಾಲಿನ್ಯ ತಡೆಯುವ ವ್ಯವಸ್ಥೆ ಮಾಡಬೇಕು.ಸುತ್ತ-ಮುತ್ತಲೂ ಗ್ರಾಮಗಳ ಮೇಲೆ ಚಿಕ್ಕ-ಚಿಕ್ಕ ಧೂಳು ಬರದಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಬೇಕೆಂದು.ಗ್ರಾಮಸ್ಥರು ಇಂದು ಕಾಖಾ೯ನೆಯ ಸಿ.ಇ.ಒ ಅವರಿಗೆ ಮನವಿಯನ್ನು ಸಲ್ಲಿಸಿದರು. ಒಂದು ವೇಳೆ ಸಮಸ್ಯೆ ಬೇಗನೆ ಬಗೆಹರಿಯದಿದ್ದರೆ ಕಾಖಾ೯ನೆಯ ಎದುರು ಅನಿರ್ದಿಷ್ಟಾವಧಿವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆಯ ಮನವಿಯನ್ನು ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ಆರ್.ಪಿ.ಐ(ಅಂಬೇಡ್ಕರ್) ಸಂಘಟನೆಯ ಜಿಲ್ಲಾ ಕಾಯ೯ದಶಿ೯ಗಳಾದ ಶಿವಾನಂದ ಹರಿಜನ.ಪ್ರಗತಿಪರ ರೈತರಾದ ಶ್ರೀ ಜಡದಾರಿ ಪಾಟೀಲ.ಸುರೇಶ ಹಿರೇಮಠ.ಪುಂಡಲಿಕ ಕೆರುಟಗಿ.ಸಂತೋಷ ಡಂಗಿ.ಕೇದಾರ ಬಿರಾದಾರ .ನಿಂಗಪ್ಪ ಡಂಗಿ.ಕನ್ನಗೊಂಡ ಡಂಗಿ.ಸಿದ್ದು ಕೆರುಟಗಿ .ಯಲ್ಲಪ್ಪ ಕೆರುಟಗಿ.ಗಂಗಪ್ಪ ಕೆರುಟಗಿ.ಇತರರು ಭಾಗವಹಿಸಿದ್ದರು.


ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ