ಇಂಡಿಯಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ

 ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ವರದಿ



ದಿನಾಂಕ   10/12/2024   ರಂದು   ಇಂಡಿ   ಪಟ್ಟಣದ   ಎಸ್.ಎಸ್.ವಿ.ವಿ.ಸಂಘದ ಶ್ರೀ ಜಿ. ಆರ್. ಗಾಂಧಿ ಕಲಾ, ಶ್ರೀ ವಾಯ್. ಎ. ಪಾಟೀಲ ವಾಣಿಜ್ಯ   ಹಾಗೂ ಶ್ರೀ ಎಮ್. ಪಿ. ದೋಶಿ  ವಿಜ್ಞಾನ  ಪದವಿ  ಮಹಾವಿದ್ಯಾಲಯದಲ್ಲಿ   ಮಾನವ ಹಕ್ಕುಗಳ ಘಟಕ, ರಾಜ್ಯಶಾಸ್ತç  &  ಸಮಾಜಶಾಸ್ತç ವಿಭಾಗದ  ಅಡಿಯಲ್ಲಿ  ‘ವಿಶ್ವ  ಮಾನವ  ಹಕ್ಕುಗಳ  ದಿನಾಚರಣೆ’ ಕಾರ್ಯಕ್ರಮ  ಜರುಗಿತು.


ಈ ಕಾರ್ಯಕ್ರಮದಲ್ಲಿ ಅತಿಥಿಗಳಾದ ಡಾ.ಸುರೇಂದ್ರ ಕೆ. ಸಹಾಯಕ ಪ್ರಾಧ್ಯಾಪಕರು, ಸಮಾಜಶಾಸ್ತç ವಿಭಾಗ, ಇವರು ಮಾತನಾಡುತ್ತಾ “ಮಾನವ ಹಕ್ಕುಗಳು ವಿಶ್ವಸಂಸ್ಥೆಯು   1948 ಡಿಸೆಂಬರ 10 ರಂದು ವಿಶ್ವ ಘೋಷಿತ ಮಾನವ ಹಕ್ಕುಗಳೆಂದು ಮಾಡಿತು. ಪ್ರತಿಯೊಬ್ಬ ಮನುಷ್ಯನೂ ಸುರಕ್ಷಿತ ಸ್ಥಳದಲ್ಲಿ ವಾಸಿಸುವ ಮತ್ತು ಜೀವನೋಪಾಯ ಮಾಡುವ ಹಕ್ಕಿಗೆ ಅರ್ಹನಾಗಿರುತ್ತಾನೆ. ಆಗಲೂ ಇಂದಿನ ಜಾಗತಿಕ ವಾತಾವರಣದಲ್ಲಿ, ಅನೇಕ ಜನರ ಮನೆಗಳು ಮತ್ತು ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಬೆದರಿಕೆ ಇದೆ. ಮತ್ತು ಈ ಅನ್ವೇಷಣೆಯಲ್ಲಿ, ವಿವಿಧ ವಿಧಾನಗಳ ಮೂಲಕ ನೋವನ್ನು ಉಂಟುಮಾಡುವುದು ಎಂದಿಗೂ ಸುರಕ್ಷಿತವೆಂದು ಭಾವಿಸುವುದಿಲ್ಲ. ಈ ರೀತಿಯ ಅನ್ಯಾಯಗಳ ಕಾರಣಕ್ಕಾಗಿ ಈ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.”  ಎಂದು  ಹೇಳಿದರು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನಮ್ಮ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಸ್.ಬಿ.ಜಾಧವ  ಅವರು  ಮಾತನಾಡುತ್ತ  “ಇಂದು ಪ್ರತಿಯೊಬ್ಬ ವ್ಯಕ್ತಿಗೆ ಅರ್ಹವಾದ ಮೂಲಭೂತ ಹಕ್ಕುಗಳನ್ನು ನೆನಪಿಸುವ ದಿನ, ಅವರು ಯಾರೇ ಆಗಿರಲಿ. ಮಾನವ ಹಕ್ಕುಗಳು ಸ್ವಾತಂತ್ರ‍್ಯ, ಸಮಾನತೆ, ಶಿಕ್ಷಣ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಒಳಗೊಂಡಿವೆ. ಈ ಹಕ್ಕುಗಳು ನ್ಯಾಯಯುತ ಸಮಾಜದ ಅಡಿಪಾಯವಾಗಿದೆ. ಮಾನವ ಹಕ್ಕುಗಳ ದಿನದ ೨೦೨೪ ರ ವಿಷಯವು "ನಮ್ಮ ಹಕ್ಕುಗಳು, ನಮ್ಮ ಭವಿಷ್ಯ, ಇದೀಗ", ಉತ್ತಮ ಭವಿಷ್ಯವನ್ನು ರೂಪಿಸಲು ವ್ಯಕ್ತಿಗಳು ಮತ್ತು ಸಮುದಾಯಗಳನ್ನು ಸಶಕ್ತಗೊಳಿಸುವಲ್ಲಿ ಮಾನವ ಹಕ್ಕುಗಳ ಪಾತ್ರವನ್ನು ಒತ್ತಿಹೇಳುತ್ತದೆ.”  ಎಂದು  ಹೇಳಿದರು.


ಈ  ಕಾರ್ಯಕ್ರಮದ  ನಿರೂಪಣೆಯನ್ನು  ಸಹಾಯಕ  ಪ್ರಾಧ್ಯಾಪಕರಾದ  ಡಾ.ವಿಶ್ವಾಸ ಕೊರವಾರ, ವಂದನಾರ್ಪಣೆಯನ್ನು  ಸಹಾಯಕ ಪ್ರಾಧ್ಯಾಪಕರಾದ ಡಾ.  ಜಯಪ್ರಸಾದ  ಡಿ. ಅವರು  ನಿರ್ವಹಿಸಿದರು.


ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಪಿ.ಕೆ.ರಾಠೋಡ, ಶ್ರೀ.ಶ್ರೀಶೈಲ, ಡಾ.ಸಿ.ಎಸ್.ಬಿರಾದಾರ, ಡಾ.ಶ್ರೀಕಾಂತ ರಾಠೋಡ, ಶ್ರೀ ಮಲ್ಲಿಕಾರ್ಜುನ ಕೋಣದೆ,   ಶ್ರೀ.ಆರ್.ಪಿ.ಇಂಗನಾಳ, ಶೃತಿ ಪಾಟೀಲ, ಶ್ವೇತಾ ಕಾಂತ, ಪರಶುರಾಮ ಅಜಮನಿ, ಪಂಕಜ ಕುಲಕರ್ಣಿ, ಶೃತಿ ಬಿರಾದಾರ, ಧಾನಮ್ಮ ಪಾಟೀಲ ಮತ್ತು ಬೋಧಕ/ಬೋಧಕೇತರ ಸಿಬ್ಬಂದಿ  ಹಾಗೂ  ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು