ಇಂಡಿ ಪಟ್ಟಣದಲ್ಲಿ ರಮಜಾನ ಹಬ್ಬ ಆಚರಣೆ.
ಇಂಡಿ. ಪಟ್ಟಣದ ಹಂಜಗಿ ರಸ್ತೆಯಲ್ಲಿರುವ ಈದಗಾ ಮೈದಾನದಲ್ಲಿ ಹಾಗೂ ಅಂಜುಮನ್ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಸಮಾಜದ ಜನರು ಸಾಮೂಹಿಕ ಪ್ರಾರ್ಥನೆ ಮಾಡಿ ರಮಜಾನ ಹಬ್ಬ ಆಚರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಉದ್ದೇಶಿಸಿ ಮಾತನಾಡಿದ ಮೌಲಾನಾ ಶಾಕಿರ ಹುಸೇನ್ ಕಾಸ್ಮಿ. ರಮಜಾನ್ ಉಪವಾಸದ ಮೂಲಕ ನಾವು ಆತ್ಮಶುದ್ಧಿ, ಸಹಾನುಭೂತಿ ಮತ್ತು ಧಾರ್ಮಿಕ ನಿಷ್ಠೆಯನ್ನು ವೃದ್ಧಿಸಿಕೊಂಡಿದ್ದೇವೆ. ಈದ್ ಉಲ್-ಫಿತ್ರ್ ಹಬ್ಬವು ಸಂತೋಷ, ಕೃತಜ್ಞತೆ ಮತ್ತು ದಾನಶೀಲತೆಯ ಸಂಕೇತವಾಗಿದೆ. ಈ ಸಂದರ್ಭದಲ್ಲಿ, ಮುಸ್ಲಿಮರು ಪರಸ್ಪರ ಕ್ಷಮೆ, ಸಹೋದರತ್ವ ಮತ್ತು ಸಮಾನತೆಯನ್ನು ಉತ್ತೇಜಿಸುತ್ತಾರೆ. ಸಮಾಜದ ಬಡವರು ಮತ್ತು ಅಗತ್ಯವಂತರಿಗೆ ಸಹಾಯ ಮಾಡುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸ್ಥಾಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈದ್ ಹಬ್ಬದ ಸಂದರ್ಭದಲ್ಲಿ ಪರಸ್ಪರ ಹಸ್ತಲಾಘವ, ಸಹೋದರತ್ವ ಮತ್ತು ಸಮಾನತೆಯನ್ನು ಉತ್ತೇಜಿಸುವುದು ಮುಖ್ಯವಾಗಿದೆ. ಅಲ್ಲಾಹನು ನಮ್ಮ ಉಪವಾಸ, ನಮಾಝ್ ಮತ್ತು ಇತರ ಇಬಾದತ್ಗಳನ್ನು ಸ್ವೀಕರಿಸಲಿ ಎಂದು ಪ್ರಾರ್ಥಿಸುತ್ತೇವೆ. ನಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಧಾರ್ಮಿಕ ನಿಷ್ಠೆಯನ್ನು ಕಾಪಾಡಿಕೊಳ್ಳಲು ಎಲ್ಲರಿಗೂ ತಾಕತ್ತು ನೀಡಲಿ ಎಂದು ದುಆ ಮಾಡಿದರು. ಈ ಸಂದರ್ಭದಲ್ಲಿ ಮುಫತಿ ಅಬ್ದುಲ್ ರಹಿಮಾನ್ ಅರಬ್, ಅಂಜುಮಾನ್ ಕಮಿಟಿ ಅಧ್ಯಕ್ಷ ಹಾಜಿಯಾಲಿ ಬಾಗವಾನ್, ...