ಮೇ 5 ರಂದು ಇಂಡಿ ತಾಲೂಕಾ ಬಂದಗೆ ಕರವೇ ಹಾಗೂ ರೈತರ ವತಿಯಿಂದ ಹೋರಾಟ.
ಮೇ 5 ರಂದು ಇಂಡಿ ನಗರ ಹಾಗೂ ನಾದ ಕೆಡಿ ಹಾಗೂ ತಾಂಬಾ ಝಳಕಿ ಹಾಗೂ ಸಾಲೋಟಗಿ ಬಂದ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದ ಕರವೇ ತಾಲೂಕಾ ಅಧ್ಯಕ್ಷ ಬಾಳು ಮೂಳಜಿ.
ಇಂಡಿ ತಾಲೂಕಿನ ಎಲ್ಲಾ ಶಾಖಾ ಕಾಲುವೆ ಹಾಗೂ ಭೀಮಾ ನದಿಗೆ ಹಾಗೂ ಹಳ್ಳಗಳಿಗೆ ನೀರು ಹರಿಸಬೇಕು ತೊಗರಿ ಬೆಳೆ ಹಾನಿಯಾಗಿದ್ದು, ರೈತರಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಪರಿಹಾರ ನೀಡಬೇಕು. ಹಾಗೂ ವಿಮಾ ಕಂಪನಿಗಳಿಂದಲು ಪರಿಹಾರ ನೀಡಬೇಕು ಎಂದು ಕರವೇ ಹಾಗೂ ರೈತರ ವತಿಯಿಂದ. ಇಂಡಿ ನಗರದಲ್ಲಿ 07-04-2025 ರಂದು ಇಂಡಿ ಬಸವೇಶ್ವರ ವೃತ್ತದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಾಲ್ಕು ದಿನಗಳ ಕಾಲ ರಾತ್ರಿ ಹಗಲು ಹೋರಾಟ ಮಾಡಿದ್ದೇವೆ. ಮಾನ್ಯ ಉಪವಿಭಾಗ ಅಧಿಕಾರಿಗಳು ನಮ್ಮ ಬೇಡಿಕೆಗೆ ಸರ್ಕಾರದ ಜೊತೆ ಚರ್ಚೆ ಮಾಡಿ ಕೂಡಲೇ ಬೇಡಿಕೆ ಈಡೇರಿಸುತ್ತೆವೆ ಎಂದು ನಮ್ಮ ಹೋರಾಟದ ವೇದಿಕೆಗೆ ಬಂದು ಹೇಳಿದ್ದಿರಿ ಅಧಿಕಾರಿಗಳು ಇನ್ನೂ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲಾ ಇದು ನೋವಿನ ಸಂಗತಿ ನಾವು ಅನ್ನದಾತರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತೇವೆ. ದಿನಾಂಕ:05-05-2025 ರಂದು ಇಂಡಿ ತಾಲೂಕ ಬಂದ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಪ್ರತಿಕಾ ಗೋಷ್ಠಿಯಲ್ಲಿ ತಿಳಿಸಿದರು.
ನಮ್ಮ ಬೇಡಿಕಗಳು ಕೂಡಲೇ ಈಡೆರಿಸಬೇಕೆಂದು ಆಗ್ರಹ. ಹಾನಿಯಾದ ತೂಗರಿ ಬೇಳೆಗೆ ಸರ್ಕಾರ ತನ್ನ ಖಜಾನೆಯಿಂದ ವಿಷೇಶ ಪ್ಯಾಕೇಜ್ ಘೋಷಣೆ ಮಾಡಿ ಪ್ರತಿ ಎಕರೇಗೆ 25000 ಯಂತೆ ಪರಿಹಾರ ನೀಡಬೇಕು ಹಾಗೂ ನಮ್ಮ ಇಂಡಿ ತಾಲೂಕಿನ ಮುಖ್ಯ ಶಾಖಾ ಎಲ್ಲಾ ಕಾಲುವೆಗೆ ಹಾಗೂ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸಬೇಕು ನಮ್ಮ ಭಾಗದ ರೈತರಿಗೆ ಬೇಡಿಕೆ ಇದ್ದು 20 ದಿನಗಳು ಕಾಲ ಇಂಡಿ ಮುಖ್ಯ ಶಾಖಾ ಕಾಲುವೆಗೆ ಮತ್ತು ಹಳ್ಳ ಕೊಳ್ಳಗಳಿಗೆ ನೀರು ಹರಿಸಬೇಕು. ನಮ್ಮ ಭಾಗದ ರೈತರ ಭಾವನೆಗಳ ಜೊತೆ ಚಲ್ಲಾಟ ಆಡ ಬೇಡಿ ಬೇಸಿಗೆಯಲ್ಲಿ ಬೀಸಿಲಿನ ತಾಪ ಹೆಚ್ಚಾಗಿದ್ದು ರೈತರ ಹೊಲದಲ್ಲಿ ತೇವಾಂಶ ಬೇಗನೆ ಹಿಡಿಯುದಿಲ್ಲಾ ಇದನ್ನು ಅರಿತು ಸರ್ಕಾರ ರೈತರ ಬೆಂಬಲಕ್ಕೆ ಬರಬೇಕು ಹಾಗೂ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ನಮ್ಮ ರೈತರ ಬೇಡಿಕೆಗಳು ಈಡೇರಿಸಬೇಕಾಗಿ ನಮ್ಮ ತಾಲೂಕು 40 ವರ್ಷಗಳಿಂದಾ ಬೀಕರ ಬರಗಾಲ ಆವರಿಸಿದ್ದು, ಅನ್ನದಾತರ ಸಂಕಷ್ಟಕ್ಕೆ ಸರ್ಕಾರ ಕೂಡಲೇ ಧಾವಿಸಬೇಕು..
ಮಹೇಶ ಹೂಗಾರ, ಧರ್ಮರಾಜ ಸಾಲೋಟಗಿ, ಮಹಾವೀರ ಕಾಮನಕೇರಿ, ವಿಜಯಕುಮಾರ ರಾಠೋಡ, ಮಂಜು ದೇವರ

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ