ಹುಚ್ಚ ನಾಯಿಯ ದಾಳಿ ಭಾರೀ ಆತಂಕವನ್ನುಂಟುಮಾಡಿದೆ. ಪಟ್ಟಣದ ವಿವಿಧ ಕಡೆಗೆ ಒಂದೇ ಹುಚ್ಚು ನಾಯಿ ೧೮ ಜನರಿಗೆ ಕಡಿದಿದೆ.
ಇಂಡಿ ನಗರದ ನಿವಾಸಿಗಳಿಗೆ ಹುಚ್ಚ ನಾಯಿಯ ದಾಳಿ ಭಾರೀ ಆತಂಕವನ್ನುಂಟುಮಾಡಿದೆ. ಪಟ್ಟಣದ ವಿವಿಧ ಕಡೆಗೆ ಒಂದೇ ಹುಚ್ಚು ನಾಯಿ ೧೮ ಜನರಿಗೆ ಕಡಿದಿದೆ.
ಟಿಪ್ಪು ಸುಲ್ತಾನ ವೃತ್ತದಲ್ಲಿ ೪ ಜನರಿಗೆ , ಸಿಂದಗಿ ರಸ್ತೆಯಲ್ಲಿ ೯ ಜನರಿಗೆ, ಅಗರಖೇಡ ರಸ್ತೆಯಲ್ಲಿ ೫ ಜನರಿಗೆ ಕಡೆದ ಘಟನೆ ಇಂಡಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಅಂಟಿರೇಬಿಸ್ ವ್ಯಾಕ್ಸಿನ್ ನೀಡಲಾಗಿದೆ. ಜೋತೆಗೆ ಟಿಟಿ ಚುಚ್ಚು ಮದ್ದು ನೀಡಲಾಗಿದೆ. ಡಾ|| ರಾಜೇಶ ಕೋಳೆಕರ, ಡಾ|| ಪ್ರೀತಿ ಕೋಳೆಕರ, ಡಾ|| ಸಂತೋಷ ಪವಾರ,ಡಾ|| ರವಿ ಅಂಬೇವಾಡಿ, ಡಾ|| ವಿಪುಲ್ ಕೋಳೆಕರ ನಾಯಿ ಕಡಿತದ ಜನರಿಗೆ ಆರೈಕೆ ಮಾಡಿದರು
ಆದರೆ, ಅವರಲ್ಲಿ ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಬಿಜಾಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಈ ಅಘಾತಕಾರಿ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದ್ದು, ನಾಗರಿಕರಲ್ಲಿ ಭಯದ ವಾತಾವರಣ ವ್ಯಾಪಕವಾಗಿತ್ತು.ನಾಯಿಗೆ ಬಸ್ ನಿಲ್ದಾಣ ಹತ್ತಿರ ಹೊಡೆದು ಸಾಯಿಸಲಾಗಿದೆ. ಸಾರ್ವಜನಿಕರು ಭಯ ಪಡುವದಿಲ್ಲ ಎಂದು ದವಾಖಾನೆಯ ಮೂಲಗಳು ತಿಳಿಸಿವೆ.
ಸತ್ತು ಬಿದ್ದ ಹುಚ್ಚುನಾಯಿ

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ