ರಾಜಸ್ಥಾನ ಮೂಲದ ಯುವಕನ ನಿಧನ – ಇಂಡಿ ಜನರಿಂದ ಸಹಾನುಭೂತಿ
ರಾಜಸ್ಥಾನ ಮೂಲದ ಯುವಕನ ನಿಧನ – ಇಂಡಿ ಜನರಿಂದ ಸಹಾನುಭೂತಿ
ರಾಜಸ್ಥಾನ ರಾಜ್ಯದ ಪಾಳಿ ಜಿಲ್ಲೆಯ ಮೂಲದ ತೇಜ್ಪಾಲ್ ಜಗದೀಶ್ ಕುಮಾರ್ (14) ವರ್ಷದ ಯುವಕ ಇಂಡಿ ಪಟ್ಟಣ ಲಚ್ಯಾಣ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ತಾಯಿಯೊಂದಿಗೆ ವಾಸವಿದ್ದು ಕೆಳದ 6 ತಿಂಗಳಂದ ಇಲ್ಲಿಯೇ ಕೆಲಸ ಮಾಡುತ್ತಿದ್ದನು. ಮೃತರ ಯುವಕನ ತಾಯಿ ಮನೆ ಮನೆಗೆ ತೆರಳಿ ಬಟ್ಟ, ಪಾತ್ರೆ ತೊಳೆಯುವ ಮೂಲಕ ಜೀವನ ಸಾಗಿಸುತ್ತಿದ್ದರು.
ಆಕಸ್ಮಿಕವಾಗಿ ಕಾಮಣಿ ಕಾಯಿಲೆಯಿಂದ ಬೆಳಲುತ್ತಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಯಲ್ಲಿಯೂ ಚೇತರಿಸಿಕೊಳ್ಳದೆ ದುರ್ಮರಣ ಹೊಂದಿದನು.
ಮೃತ ಯುವಕನಿಗೆ ತಾಯಿ, ಒಬ್ಬ ಸಹೋದರ ಹಾಗೂ ಒಬ್ಬ ಸಹೋದರಿ ಇದ್ದಾರೆ. ಮೃತದೇಹವನ್ನು ಸ್ವಗ್ರಾಮಕ್ಕೆ ಸಾಗಿಸಲು ಸುಮಾರು 70–80 ಸಾವಿರ ರೂಪಾಯಿ ವೆಚ್ಚವಾಗಲಿದೆ ಎಂದು ತಿಳಿದುಬಂದಿದೆ.
ಈ ದುಃಖದ ಸಂದರ್ಭದಲ್ಲಿ ಇಂಡಿ ಪೊಲೀಸ್ ಇಲಾಖೆ, ಮಹಿಳೆಯರು ಹಾಗೂ ಇಂಡಿ ನಗರದಲ್ಲಿರುವ ರಾಜಸ್ಥಾನ ಮೂಲದ ವ್ಯಾಪಾರಸ್ಥರು ಹಾಗೂ ಪಟ್ಟಣದ ಸಾರ್ವಜನಿಕರು, ಯುವಕರು ಕೈ ಜೋಡಿಸಿ ಅಗತ್ಯ ಹಣ ಸಂಗ್ರಹಿಸಿ, ಮೃತದೇಹವನ್ನು ಸ್ವಗ್ರಾಮಕ್ಕೆ ಕಳುಹಿಸಲು ನೆರವಾದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ