ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೇ ಮತ್ತು ಒಂದು ದಿನದ ಉಚಿತ ಕಾರ್ಯಾಗಾರ ಹಮ್ಮಿಕೊಂಡಲಾಗಿದೆ.: ಸುನಿಲಕುಮಾರ ಅತನೂರ.
ಇಂಡಿ. ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಇಂಡಿ ಘಟಕದ ವತಿಯಿಂದ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೇ ಮತ್ತು ಒಂದು ದಿನದ ಉಚಿತ ಕಾರ್ಯಾಗಾರ ಹಮ್ಮಿಕೊಂಡಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಇಂಡಿ ತಾಲೂಕಿನ ಅಧ್ಯಕ್ಷ ಸುನಿಲ ಕುಮಾರ ಅತನೂರ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಪ್ಟಂಬರ್ 7 ರಂದು ಇಂಡಿ ನಗರದ ಗುರು ಭವನದಲ್ಲಿ ನಡೆಯಲಿದೆ ವಾಯ್.ವ್ಹಿ.ಪಾಟೀಲ ಫೌಂಡೇಷನ್ ವತಿಯಿಂದ ಪ್ರಥಮ ಬಹುಮಾನ 25 ಸಾವಿರ. ದ್ವಿತೀಯ ಬಹುಮಾನ 15 ಸಾವಿರ, ತೃತೀಯ ಬಹುಮಾನ 11ಸಾವಿರ ನಾಲ್ಕನೆಯ ಬಹುಮಾನ 7500 ಸಾವಿರ ಐದನೆಯ ಬಹುಮಾನ 5 ಸಾವಿರ ಆರನೇಯ ಬಹುಮಾನ 3 ಸಾವಿರ ಮತ್ತು ಸಮಾಧಾನಕರವಾಗಿ 20 ಪುಸ್ತಕಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಉಪನ್ಯಾಸಕರಾಗಿ ಮೇಜರ ಸಿದ್ದಲಿಂಗಯ್ಯ ಹಿರೇಮಠ (ಕೆ.ಎ.ಎಸ್.) ಮತ್ತು ವಶರಣ್ಯ ಭಂಡಾರಿಮಠ, ಮಲ್ಲು ಅತನೂರ, ಪಂಡೀತ ಇಮ್ಮನವರ, ಶಿವಮೂರ್ತಿ ಯಳಮೇಲಿ, ಆಗಮಿಸುತ್ತಿದ್ದುವ ಜಿಲ್ಲಾ 35 ವಯೋಮಿತಿಯ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಹುಲ ಮಡ್ಡಿಮನಿ, ಸಚಿನ ಹೋಸಮನಿ, ಪ್ರಕಾಶ ರವಳಿ, ಅಕಬರಖಾಣೆ, ಈಶ್ವರ ಸಜ್ಜನ, ಆನಂದ ಆಲಮೇಲ, ರಮೇಶ ಮಾವಿನಹಳ್ಳಿ, ಶರಣುಗೌಡ ಡೋಣೂರ, ಸಂತೋಷ ರವಳಿ, ಸುದೀಪ ಕಿತ್ತಲಿ, ರಾಹುಲ ಸುಲಾಖೆ, ಅಭಿಷೇಕ ಏಳಗಿ, ಅಬ್ರರಾ ಮಕಾಂದಾರ, ರಶೀದ ತಾಂಬೋಳಿ,ರಫೀಕ ತಾಂಬೋಳಿ ಇದ್ದರೂ. ಹಚ್ಚಿನ ಮಾಹಿತಿಗಾಗಿ 8105446595, 8123189963, 9632359234

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ