ಪೋಸ್ಟ್‌ಗಳು

ಮೇ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವೀರಭದ್ರೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರಗುವುದು.

ಇಮೇಜ್
ವೀರಭದ್ರೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರಗುವುದು. ಸಮಿಪದ ಅಂಜುಟಗಿ ಗ್ರಾಮದ ಶ್ರೀ  ವೀರಭದ್ರೇಶ್ವರ  ದೇವರಿಗೆ  ಬೇಳಗ್ಗೆ  ನೇವಿದ್ಯ - ಅಭಿಷೇಕ ನಂತರ 9-00 ಗಂಟೆಗೆ ದೇವಸ್ಥಾನದ ಮುಂದೆ  ಪುರವಂತರ ಸೇವೆ ನಡೆಯುವದು ನಂತರ ದೇವಸ್ಥಾನದಿಂದ   ವೀರಭದ್ರಶ್ವರ  ಪಲ್ಲಕ್ಕಿ  ಪುರವಂತರ  ವಾದ್ಯ-ವೈಭವಗಳೋಂದಿಗೆ ಅಗ್ನಿ ಕುಂಡಕ್ಕೆ  ತಲುಪುವದು  ನಂತರ  ಮಧ್ಯಾಹ್ನ 1-00 ಗಂಟೆಗೆ  ಅಗ್ನಿ ಕುಂಡಲ ಪ್ರವೇಶ ಜರಗುವುದು ನಂತರ 2-00 ಗಂಟೆಯಿಂದ ಬಸು ಮದರಿ ಸಂಘಡಿಗರು ಹಾಗೂ  ಸುರೇಶ ಕೆಂಬಾವಿ ಸಂಘಡಿಗರಿಂದ ಸುಪ್ರಸಿದ್ಧ ಗೀ ಗೀ ಪದಗಳು  ಅದೇ ರಾತ್ರಿ 10-00 ಗಂಟೆಗೆ ಮ್ಯೂಜಿಕ್ ಮೈಲಾರಿ ಅರ್ಪಿಸುವ  ಅಪ್ಪಾಜಿ ಮೇಲೋಡಿಸ್ಸ್  ಇವರಿಂದ ಹಾಸ್ಯರಮಂಜರಿ ಕಾರ್ಯಕ್ರಮ ಜರಗುವುದು.   ಶನಿವಾರ ದಿನಾಂಕ 31ರಂದು  ಬೆಳಿಗ್ಗೆ 8-00 ರಿಂದ ಅದೇ ಬಳಗದಿಂದ ಗೀ ಗೀ ಪದಗಳು ಜರಗುವುದು ಸಾಯಂಕಾಲ 5-00ಗಂಟೆಗೆ ಪ್ರಸಿದ್ಧ ಪೈಲವಾನರಿಂದ ಜಂಗೀ ನಿಕಾಲಿ ಕುಸ್ತಿ  ಜರಗುವುದು. ನಂತರ 8-00 ಗಂಟೆಗೆ ಚಿತ್ರ - ವಿಚಿತ್ರ  ಮದ್ದು ಸುಡಲಾಗುವುದು ನಂತರ 10-00ಗಂಟೆಗೆ ಶ್ರೀ ಗುರು ಪುಟ್ಟರಾಜ  ಕೃಪಾಪೋಷಿತ ಕಲಾ ನಾಟ್ಯ ಸಂಘ ಬಾಗಲಕೋಟೆ ಇವರಿಂದ ಮಹಾ ಶಿವರಣಿ ಹೇಮರಡ್ಡಿ ಮಲ್ಲಮ್ಮ - ಶ್ರೀ ಮಲ್ಲಿಕಾರ್ಜುನ ಮಹಾತ್ಮೆ  ಎಂಬ ಭಕ್ತ...

ಶಾಲಾ ಪ್ರಾರoಭೋತ್ಸವ ಪುಷ್ಪ ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತಿಸಿದ ಶಾಲಾ ಅಧ್ಯಕ್ಷರು.

ಇಮೇಜ್
 ಝಳಕಿ : ಶಾಲಾ ಪ್ರಾರoಭೋತ್ಸವ ಪುಷ್ಪ ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತಿಸಿದ ಶಾಲಾ ಅಧ್ಯಕ್ಷರು.        ಝಳಕಿ : ಅಂಜುಟಗಿ ಗ್ರಾಮದ ಶ್ರೀ ಮುದ್ದೇಶ ಪ್ರಭು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲನೆಯ ದಿನದಂದು ಶಾಲಾ ವಿದ್ಯಾರ್ಥಿಗಳಿಗೆ ಮನೆ ಮನೆಗೆ ಹೋಗಿ ಸ್ವಾಗತಿಸಿ, ಶಾಲಾ ಆವರಣದಲ್ಲಿ  ಶಾಲಾ ಕಮಿಟಿಯ ಅಧ್ಯಕ್ಷರು ಮಲ್ಲಿಕಾರ್ಜುನ ರೆಡ್ಡಿ ಮಾಲಿಪಾಟೀಲ, ಕಾರ್ಯದರ್ಶಿ ವಕೀಲರು ಎನ್. ವ್ಹಿ. ಊಟಗಿ ಮತ್ತು ಶಾಲಾ ಮುಖ್ಯ ಗುರುಗಳು ಎ. ಜಿ. ಬಳಗಾ ಎಲ್ಲ ವಿದ್ಯಾರ್ಥಿಗಳಿಗೆ ಪುಷ್ಪ ನೀಡುವದರ ಮುಖಾಂತರ ಸ್ವಾಗತಿಸಿದರು.     ಈ ಸಂದರ್ಭದಲ್ಲಿ ಅಡಿವೆಪ್ಪ ತಳವಾರ, ಪೂರ್ಣಿಮಾ ಊಟಗಿ, ಎಸ್. ಜಿ. ಹಡಪದ, ಪಿ. ವ್ಹಿ. ಊಟಗಿ, ಎಸ್.ಎಸ್. ಕಂಬಾರ, ಎಸ್.ಕೆ ಕೊಡತೇ, ಆಯ್. ಕೆ. ಮಲಗೊಂಡ, ಆರ್. ಎಸ್. ಸಾಲಿಗಾಂವ ಹಾಗೂ ಎಲ್ಲ ವಿದ್ಯಾರ್ಥಿಗಳು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು

ಆರೋಗ್ಯವಿಲ್ಲದಿದ್ದರೆ ಜಗತ್ತಿನ ಎಲ್ಲಾ ಐಶ್ವರ್ಯವೂ ವ್ಯರ್ಥ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಇಮೇಜ್
 ಇಂಡಿ.  ಮಾನವನಿಗೆ ಜೀವದಲ್ಲಿ ಎಲ್ಲವಕ್ಕೂ ಮಿಗಿಲಾಗಿ ಆರೋಗ್ಯವೇ ಮೊದಲು.  ಆರೋಗ್ಯವಿಲ್ಲದಿದ್ದರೆ ಜಗತ್ತಿನ ಎಲ್ಲಾ ಐಶ್ವರ್ಯವೂ ವ್ಯರ್ಥ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.  ಪಟ್ಟಣದ ತಾಲೂಕಾ  ಸರ್ಕಾರಿ ಆಸ್ಪತ್ರೆಯಲ್ಲಿ 15ನೇ ಹಣಕಾಸು ಆಯೋಗದ ಅಡಿಯಲ್ಲಿ ನಿರ್ಮಿಸಲಾದ ತಾಲೂಕಾ   ಸಾರ್ವಜನಿಕ  ಆರೋಗ್ಯ ಘಟಕ  ಪ್ರಯೋಗಾಲಯದ ಉದ್ಘಾಟನೆ ನೆರವೆರಿಸಿ ಮಾತನಾಡಿದ ಅವರು ಮಾನವನಿಗೆ ಈ ಬದುಕಿನಲ್ಲಿ ಆರೋಗ್ಯವೇ ಶ್ರೇಷ್ಠ ಆಸ್ತಿ. ಹಣ, ಹುದ್ದೆ, ಹೆಸರು ಎಲ್ಲವೂ ತಾತ್ಕಾಲಿಕ, ಆದರೆ ಆರೋಗ್ಯ ಶಾಶ್ವತವಾದ ನಿಜವಾದ ಸಂಪತ್ತು ಎಂದು ಹೇಳಿದರು. ಸ್ವಸ್ಥ ಸಮಾಜವೇ ಸಮೃದ್ಧ ದೇಶದ ಮೂಲಸ್ಥಂಭ. ಈ ಪ್ರಯೋಗಾಲಯದಿಂದ ಜನರಿಗೆ ಆರೋಗ್ಯದತ್ತ ಒಂದು ಹೆಜ್ಜೆ ಹತ್ತಲು ಸಹಾಯವಾಗಲಿದೆ. ಸರ್ಕಾರದ ಉದ್ದೇಶವೇ—ಗ್ರಾಮೀಣ ಭಾಗಕ್ಕೂ ನವೀಕರಿತ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸುವುದು. ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳ ಕಲ್ಪನೆಯ ಮೂಲಕ ಜನಸಾಮಾನ್ಯರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಸರ್ಕಾರ ಬದ್ಧವಾಗಿದೆ  ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆಗಳು ಜನಸಾಮಾನ್ಯರ ಆಶಾಕಿರಣವಾಗಿವೆ. ಇಲ್ಲಿ ಬರೋದು ಬಡಜನರು, ರೈತರು, ಕಾರ್ಮಿಕರು, ದುಡಿಮೆದಾರರು. ಡಾಕ್ಟರ್‌ಗಳು ತಮ್ಮ ಕರ್ತವ್ಯವನ್ನು ಸೇವಾಭಾವದಿಂದಲೇ ನಿರ್ವಹಿಸಬೇಕು. ಇದು ಕೇವಲ ಉದ್ಯೋಗವಲ್ಲ, ಇದು ದೇವರು ನೀಡಿದ ಅವಕಾಶ. ತಾವು ಲಾಭಕ್ಕಾಗಿ ಅಲ್ಲ...

ಹುಚ್ಚ ನಾಯಿಯ ದಾಳಿ ಭಾರೀ ಆತಂಕವನ್ನುಂಟುಮಾಡಿದೆ. ಪಟ್ಟಣದ ವಿವಿಧ ಕಡೆಗೆ ಒಂದೇ ಹುಚ್ಚು ನಾಯಿ ೧೮ ಜನರಿಗೆ ಕಡಿದಿದೆ.

ಇಮೇಜ್
 ಇಂಡಿ ನಗರದ ನಿವಾಸಿಗಳಿಗೆ ಹುಚ್ಚ ನಾಯಿಯ ದಾಳಿ ಭಾರೀ ಆತಂಕವನ್ನುಂಟುಮಾಡಿದೆ. ಪಟ್ಟಣದ ವಿವಿಧ ಕಡೆಗೆ ಒಂದೇ ಹುಚ್ಚು ನಾಯಿ ೧೮ ಜನರಿಗೆ ಕಡಿದಿದೆ. ಟಿಪ್ಪು ಸುಲ್ತಾನ ವೃತ್ತದಲ್ಲಿ ೪ ಜನರಿಗೆ , ಸಿಂದಗಿ ರಸ್ತೆಯಲ್ಲಿ ೯ ಜನರಿಗೆ, ಅಗರಖೇಡ ರಸ್ತೆಯಲ್ಲಿ ೫ ಜನರಿಗೆ ಕಡೆದ ಘಟನೆ ಇಂಡಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ  ಅಂಟಿರೇಬಿಸ್ ವ್ಯಾಕ್ಸಿನ್ ನೀಡಲಾಗಿದೆ. ಜೋತೆಗೆ ಟಿಟಿ ಚುಚ್ಚು ಮದ್ದು ನೀಡಲಾಗಿದೆ.  ಡಾ|| ರಾಜೇಶ ಕೋಳೆಕರ, ಡಾ|| ಪ್ರೀತಿ ಕೋಳೆಕರ, ಡಾ|| ಸಂತೋಷ ಪವಾರ,ಡಾ|| ರವಿ ಅಂಬೇವಾಡಿ, ಡಾ|| ವಿಪುಲ್ ಕೋಳೆಕರ ನಾಯಿ ಕಡಿತದ ಜನರಿಗೆ ಆರೈಕೆ ಮಾಡಿದರು ಆದರೆ, ಅವರಲ್ಲಿ ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಬಿಜಾಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ  ಎಂದು ತಿಳಿದುಬಂದಿದೆ.  ಈ ಅಘಾತಕಾರಿ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದ್ದು, ನಾಗರಿಕರಲ್ಲಿ ಭಯದ ವಾತಾವರಣ ವ್ಯಾಪಕವಾಗಿತ್ತು.ನಾಯಿಗೆ ಬಸ್ ನಿಲ್ದಾಣ ಹತ್ತಿರ ಹೊಡೆದು ಸಾಯಿಸಲಾಗಿದೆ. ಸಾರ್ವಜನಿಕರು ಭಯ ಪಡುವದಿಲ್ಲ ಎಂದು ದವಾಖಾನೆಯ ಮೂಲಗಳು ತಿಳಿಸಿವೆ. ಸತ್ತು ಬಿದ್ದ ಹುಚ್ಚುನಾಯಿ

ಇಂಡಿ ತಾಲ್ಲೂಕು ಬ್ರಾಹ್ಮಣ ಮಹಾ ಸಭಾದ ಆಶ್ರಯದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರತಿಭಾವಂತ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು

ಇಮೇಜ್
 ಇಂಡಿ ತಾಲ್ಲೂಕು ಬ್ರಾಹ್ಮಣ ಮಹಾ ಸಭಾದ ಆಶ್ರಯದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರತಿಭಾವಂತ ಬ್ರಾಹ್ಮಣ ವಿದ್ಯಾರ್ಥಿಗಳನ್ನು  ಸನ್ಮಾನಿಸಲಾಯಿತು ವಿಪ್ರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಇಂಡಿ : ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದುಕೊಂಡು ವಿದ್ಯಾರ್ಥಿಗಳಿಗೆ ಸನ್ಮಾನಿಸುವದು ಕೇವಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವದಲ್ಲ, ಅದರ ಜೊತೆಗೆ ವಿದ್ಯೆಗೆ ಮಹತ್ವ ನೀಡುವ ಮಹತ್ತರ ಕಾರ್ಯವಾಗಿದೆಯೆಂದು ಹಿರೇಮಣ್ಣುರಿನ ವೇದತೀರ್ಥ ಸಂಸ್ಕೃತ ವಿದ್ಯಾಪೀಠದ ಕುಲಪತಿ ಪಂಡಿತ ಅನಂತಾಚಾರ್ಯ ಅಕಮಂಚಿ ಅಭಿಪ್ರಾಯಪಟ್ಟರು.  ಅವರು ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ತಾಲ್ಲೂಕು ಶಾಖೆ ಇಂಡಿ ವತಿಯಿಂದ ಸೋಮವಾರ ಸಾಯಂಕಾಲ ಇಂಡಿ ಪಟ್ಟಣದ ಶ್ರೀ ಸತ್ಯನಾರಾಯಣ ದೇವಸ್ಥಾನದ ಸಭಾ ಭವನದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.  ಎಲ್ಲಾ ಸಂಪತ್ತುಗಳಿಗಿಂತ ಶಿಕ್ಷಣ ಸಂಪತ್ತು ಶ್ರೇಷ್ಠ ಎಂದ ಅವರು ಮಕ್ಕಳು ವಿದ್ಯೆಯಲ್ಲಿ  ಆಗಿರಲಿ, ಕ್ರೀಡೆಯಲ್ಲಿರಲಿ ಅಥವಾ ಇನ್ನಿತರ ಯಾವದೇ ಸ್ಪರ್ಧೆಯಲ್ಲಿ ಸಾಧನೆ ಮಾಡಿರಲಿ ಅಂತಹ ಮಕ್ಕಳನ್ನು ಬ್ರಾಹ್ಮಣ ಮಹಾ ಸಭಾ ಗುರುತಿಸಿ ಸನ್ಮಾನಿಸುವ ಕಾರ್ಯ ನಿರಂತರವಾಗಿ ಮಾಡಬೇಕೆಂದರು.  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಂಟೀ ಕಾರ್ಯದರ್ಶಿ ಸತಿಶ್ಚಂದ್ರ ಕುಲಕರ್ಣಿ ಮಾತನಾಡಿ, ಅಖಿಲ ಕರ್ನಾಟಕ ಮಹಾ ಸಭಾ ಪ್ರ...

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಮೇಜ್
 ಇಂಡಿ. ಪಟ್ಟಣದ  ಬಿ.ಎಲ್.ಈ  ಅಸೋಸಿಯೇಶನ ಇಂಡಿ ವತಿಯಿಂದ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ  ಉರ್ದು ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ  ಪ್ರಥಮ ದ್ವಿತಿಯ ತೃತೀಯ ಸ್ಥಾನ ಪಡೆದ  ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.  ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನ ಗಳಿಸಿದ  ಶಮ್ಸ್  ಪ್ರೌಢ ಶಾಲೆ ಇಂಡಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿ.ಎಲ್‌.ಈ ಅಸೋಸಿಯೇಶನ ಉಪಾಧ್ಯಕ್ಷರಾದ ಹಸನ ಮುಜಾವರ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾಗಿ ಧರ್ಮಗುರು ಮೌಲಾನಾ ಜಿಯಾವುಲ್ ಹಕ್ ಉಮರಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾಭ್ಯಾಸವೆಂದರೆ ಬದುಕಿಗೆ ಬೆಳಕು ತರುವ ಶಕ್ತಿ. ನಮ್ಮ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿರುವುದು ಹೆಮ್ಮೆಗಾಯಕ. ಇವರೆಲ್ಲರ ಸಾಧನೆ ಇತರರಿಗೂ ಪ್ರೇರಣೆ ನೀಡಲಿ.  ಈ ಸನ್ಮಾನ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ತುಂಬಿದಂತಾಯಿತು. ಬಿಎಲ್‌ಇ ಅಸೋಸಿಯೇಶನ ವತಿಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮ  ಸಾಮಾಜಿಕ ಜವಾಬ್ದಾರಿಯ ನಿಜವಾದ ಪ್ರತಿರೂಪವಾಗಿದೆ ಎಂದು ಹೇಳಿದರು. ಮುಫ್ತಿ ಅಬ್ದುರ್ರಹ್ಮಾನ್ ಅರಬ್ ಮಾತನಾಡಿ , ಧರ್ಮ ಮತ್ತು ಶಿಕ್ಷಣ ಇಬ್ಬರೂ ಕೈಗೊಳ್ಳಬೇಕಾದ ಮಹತ್ವಪೂರ್ಣ ವಿಷಯಗಳು. ವಿದ್ಯೆಯ ಮೂಲಕ ವ್ಯಕ್ತಿತ್ವ ವಿಕಸನವಾಗ...

ಕಾಲುವೆಗೆ ನೀರು ಬಂದಿರುವರಿಂದ ಗಂಗೆಗೆ ಪೂಜೆ ಸಲ್ಲಿಸಲಾಯಿತು.

ಇಮೇಜ್
 ಸಾಲೋಟಗಿ ಹತ್ತಿರ ಕಾಲುವೆಗೆ  ನೀರು ಬಂದಾಗ ಎಲ್ಲಾ ರೈತರು ಹಾಗೂ ಕರವೇ ಮುಖಂಡರು ಕೂಡಿಕೊಂಡು ಗಂಗೆಗೆ ಪೂಜೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು. ಸರಕಾರಕ್ಕೂ, ಜನ ಪ್ರತಿನಿಧಿಗಳು ಬೆಂಬಲಿಸಿದ ರೈತರಿಗೂ, ಅಧಿಕಾರಿಗಳಿಗೂ, ವಿವಿಧ ಸಂಘಟನೆಗಳ ಮುಖಂಡರಿಗೂ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದ ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ಹೇಳಿದರು.  ಕಳೆದ ತಿಂಗಳಲ್ಲಿ ನಾಲ್ಕು ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ  ಮಾಡಿದ್ದೆವು.ಹಾಗೂ ಈ ತಿಂಗಳು ಮೇ 05 ರಂದು ಇಂಡಿ ಬಂದ ಕರೆ ನೀಡಿದೆವಿ ನೀರು ಹರಿಸಿದ್ದರಿಂದ ಬಂದ ವಾಪಸ್ ಪಡೆದೆವು ಏತಕ್ಕಾಗಿ? ಬಿರು ಬೇಸಿಗೆಯಲ್ಲಿ ನಮ್ಮ ರೈತರಿಗೆ ನೀರು ಕೊಡಿ, ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ನಷ್ಟ ಆದ ತೊಗರಿಗೆ ಪರಿಹಾರ ನೀಡಬೇಕು ಹಾಗೂ ವಿಮಾ ಕಂಪನಿಯಿಂದ ಪರಿಹಾರ ನೀಡಬೇಕು ತೊಗರಿ ವಿಷಯ ಸರ್ಕಾರದ ಹಂತದಲ್ಲಿದೆ ಎಂದು ಈಗ ನಮ್ಮ ಹೋರಾಟದ ಫಲವಾಗಿ ಮತ್ತು ರೈತರಿಗೋಸ್ಕರ,ಸರ್ಕಾರ ಕಾಲುವೆಗೆ ನೀರು ಹರಿಸುತ್ತಿದ್ದಾರೆ. ಇಂದು ಸಾಲೋಟಗಿ ಹತ್ತಿರ ಕಾಲುವೆ  ನೀರು ಬಂದಾಗ ಎಲ್ಲಾ ರೈತರು ಹಾಗೂ ಕರವೇ ಮುಖಂಡರು ಕೂಡಿಕೊಂಡು ಗಂಗೆಗೆ ಪೂಜೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು. ಸರಕಾರಕ್ಕೂ, ಜನ ಪ್ರತಿನಿಧಿಗಳು ಬೆಂಬಲಿಸಿದ ರೈತರಿಗೂ, ಅಧಿಕಾರಿಗಳಿಗೂ, ವಿವಿಧ ಸಂಘಟನೆಗಳ ಮುಖಂಡರಿಗೂ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳ...

ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025 ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಕರೆಯಲಾಗಿದೆ.

ಇಮೇಜ್
 ಐಟಿಐ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆರಂಭ ಇಂಡಿ: ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025 ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಯು ದಿ: 09-05-2025 ರಿಂದ ಆರಂಭವಾಗಿ  ದಿ: 28-05-2025 ರವರೆಗೆ ಅವಕಾಶ ಇರುತ್ತದೆ. ಈ ತರಬೇತಿ ಸಂಸ್ಥೆಯಲ್ಲಿ ಫಿಟ್ಟರ್-2 ವರ್ಷ, ಎಲೆಕ್ಟ್ರಿಶಿಯನ್-2 ವರ್ಷ, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್-2 ವರ್ಷ, ಸಿ ಎನ್ ಸಿ ಮಶಿನಿಂಗ್ ಟೆಕ್ನಿಶಿಯನ್-2 ವರ್ಷದ ಕೋರ್ಸ್ ಗಳು ಲಭ್ಯವಿದ್ದು, 10 ನೇ ತರಗತಿ ಪಾಸಾದ ವಿದ್ಯಾರ್ಥಿಗಳು www.cite.karnataka.gov.in ಈ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪ್ರಾಚಾರ್ಯ ಪಿ ವೈ ರಜನಿಕರ (8073341505) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾವು ನಮ್ಮ ಬಂದ್ ಕರೆ ಯನ್ನು ಹಿಂದೆ ಪಡೆಯುತ್ತೇವೆ ಎಂದು ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ.

ಇಮೇಜ್
 ಇಂಡಿ. ಉಪವಿಭಾಗ ಅಧಿಕಾರಿಗಳು ಶ್ರೀಮತಿ ಅನುರಾಧ ವಸ್ತ್ರದ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು ಸರ್ಕಾರ ನೀರು ಬಿಡುಗಡೆಗೊಳಿಸಿದೆ ಅದರಿಂದ ನೀವು ಹೋರಾಟ ಹಿಂದೆ  ತೆಗೆದುಕೊಳ್ಳಿ ಅಂತ ವಿನಂತಿಸಿದರು ಹೋರಾಟಗಾರರು ನಾವು ನಮ್ಮ ಹೋರಾಟ ಅನ್ನದಾತರ ಪರವಾಗಿದ್ದು ನೀರು ಬಿಡುಗಡೆಗೊಳಿಸಿದ ಸಂತಸದ ವಿಷಯ ನಾವು ನಮ್ಮ ಬಂದ್ ಕರೆ ಯನ್ನು ಹಿಂದೆ ಪಡೆಯುತ್ತೇವೆ ಎಂದು ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ ಪತ್ರಿಕಾ ಹೇಳಿಕೆ ನೀಡಿದರು. ಈ ದೇಶದಲ್ಲಿ ಹೋರಾಟವಿಲ್ಲದೇ ಯಾವುದೂ ಸುಲಭವಾಗಿ ದಕ್ಕುವುದಿಲ್ಲ. ಒಂದು ಹಸಿಗೂಸು ಸಹ ತನ್ನ ಹಸಿವನ್ನು ನೀಗಿಸಿಕೊಳ್ಳಬೇಕಾದರೂ ಅಳಬೇಕಾಗುತ್ತದೆ . ಹಾಗೆಯೇ ಜಿಡ್ಡುಗಟ್ಟಿದ ಈ ಆಡಳಿತ ವ್ಯವಸ್ಥೆ ಕಣ್ಣು ತೆರೆಯಬೇಕಾದರೆ ಹೋರಾಟಗಳು, ಸತ್ಯಾಗ್ರಗಳು ಅವಶ್ಯವಿರುತ್ತವೆ. ಕಳೆದ ತಿಂಗಳಲ್ಲಿ ಇಂಡಿ ಮುಖ್ಯ ಕಾಲುವೆಗೆ ನೀರು ಹರಿಸಬೇಕು ಹಾಗೂ ನಷ್ಟ ಆದ ತೂಗರಿ ಪರಿಹಾರ ನೀಡಬೇಕು ಹಾಗೂ ವಿಮಾ ಕಂಪನಿಗಳು ಪರಿಹಾರ ನೀಡಬೇಕು ಎಂದು ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ ಸರ್ಕಾರದ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು ಇಂತಹ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಇಂಡಿಯ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರೈತರು, ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ನಿರಂತರವಾಗಿ 4 ನಾಲ್ಕಾರು ದಿನಗಳ  ಅಹೋರಾತ್ರಿ ಧರಣಿ ಸತ್ಯಾಗ್ರಹ 109 ಗಂಟೆ ನಡೆಸಿದ್ದು ಈಗ ಇತಿಹಾಸ. ಧರಣಿ ಮಾಡ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು