ಎಳ್ಳು ಅಮಾವಾಸ್ಯೆ ಉತ್ತರ ಕರ್ನಾಟಕ ಕಡುಬಿನ ಊಟ ಜೋರು
*ಎಳ್ಳು ಅಮಾವಾಸ್ಯೆ ಉತ್ತರ ಕರ್ನಾಟಕ ಕಡುಬಿನ ಊಟ ಜೋರು* ಇಂಡಿ: ಎಳ್ಳು ಅಮಾವಾಸ್ಯೆ ಅಂದರೆ ಉತ್ತರ ಕರ್ನಾಟಕ ರೈತರ ಬಹು ದೊಡ್ಡ ಹಬ್ಬ ಎಂದರೆ ತಪ್ಪಾಗಲಾರದು. ಹೌದು ಇದರ ಹಿಂದಿನ ದಿನ ಕಾಯಿ ಪಲ್ಲೆ ಖರೀದಿಸುವದು ಹಾಗೂ ಬಿಡಿಸುವದು ಅಥವಾ ಕಾಯಿಪಲ್ಲೆ ಸೋಸುವದೇ ಈ ಭಾಗದ ಹೆಣ್ಣು ಮಕ್ಕಳ ಸಂಭ್ರಮವೋ ಸಂಭ್ರಮ. ಈ ಹಬ್ಬವನ್ನು ಮಾಘ ಮಾಸದಲಿ ಹೇರಳವಾಗಿ ಸಿಗುವ ತರತರಹದ ಕಾಯಿಪಲ್ಲೆ, ವಿವಿದ ಪ್ರಕಾರದ ಕಾಳುಗಳನ್ನು ಸೇರಿಸಿ ಪಲ್ಲೆ ಮಾಡಿ, ಅದರ ಜೊತೆಗೆ ಸಜ್ಜಿ ರೂಟ್ಟಿ, ಸೆಂಗಾ ಹೋಳಿಗೆ, ಹೂರಣ ಹೋಳಿಗೆ, ಕಡುಬಿನ ಊಟ ಮಾಡುವುದು ವಿಶೇಷ. ರೈತನ ಜೀವನಾಡಿ ಬೆಳೆ ಜೋಳ. ಆ ಜೋಳದ ಗದ್ದೆಯ ಮಧ್ಯೆ ಕಲ್ಲು ಇಟ್ಟು ಪೂಜೆ ಮಾಡಿ ನೈವೇದ್ಯ ಹಿಡಿದು, ಹೊಲದ ತುಂಬಾ ತಿರುಗುತ್ತಾ ಸಜ್ಜಿ ರೊಟ್ಟಿ ಚವಳಿಕಾಯಿ ಚಾಂಗ್ ಬೊಲೋ ಎಂದು ಜೈಕಾರ ಹಾಕುವುದು ಹಿಂದಿನಿಂದ ಬಂದ ಸಂಪ್ರದಾಯ. ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದ ಇಂಡಿ ಪಟ್ಟಣದ ಏಕೈಕ ಮನೆತನ ಅದು ಕಾಸುಗೌಡ ಬಿರಾದಾರ ಅವರ ಮನೆತನ. ಈ ಸಂದರ್ಭದಲ್ಲಿ ಕಾಸುಗೌಡ ಬಿರಾದಾರ, ಅನೀಲಗೌಡ ಬಿರಾದಾರ, ಸುನೀಲಗೌಡ ಬಿರಾದಾರ, ಸತ್ತಾರ ಬಾಗವಾನ, ಜಬ್ಬಾರ್ ಅಣ್ಣಾ, ಶಿವಾನಂದ ಚಾಳಿಕಾರ, ಸಿದ್ದು ಡಂಗಾ, ರಮೇಶ ರಾಠೋಡ, ದಯಾನಂದ ಪಾಟೀಲ, ಅಜಿತ್ ಸ್ವಾಮಿ, ಮಲ್ಲು ಪಾಟೀಲ, ಸಿದ್ದು ಬಿರಾದಾರ, ಶಿವನಗೌಡ ಸಿಂಗ್ಪಾಟೀಲ, ಸಂಜು ಪವಾರ, ರಾಚು ಬಡಿಗೆರ, ಸೊಮು ಬ್ಯಾಳಿ ಸೇರಿದಂತೆ ಹಲವು ಮುಖಂಡರು ಇದ್ದರು....