ಪೋಸ್ಟ್‌ಗಳು

ಏಪ್ರಿಲ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ದೌರ್ಜನ್ಯ ನಿಯಂತ್ರಣ ಸಭೆ ಜರುಗಿತ್ತು.

ಇಮೇಜ್
   ಇಂಡಿ - ಪಟ್ಟಣದ ಮಿನಿ ವಿಧಾನಸೌಧಾ ಸಭಾ ಭವನದಲ್ಲಿ ಇಂದು ಉಪವಿಭಾಗದಂಡಾಧಿಕಾರಿ ಅನುರಾಧಾ ವಸ್ತ್ರದ ಇವರ ಅಧ್ಯಕ್ಷತೆಯಲ್ಲಿ  ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ದೌರ್ಜನ್ಯ ನಿಯಂತ್ರಣ  ಸಭೆ ಜರುಗಿತ್ತು.   ಈ ಸಂಧರ್ಬದಲ್ಲಿ ಉಪವಿಭಾಗದಂಡಾಧಿಕಾರಿ ಅನುರಾಧಾ ವಸ್ತ್ರದ ಸಭೆಯಲ್ಲಿ ಮಾತನಾಡಿ ಭಾರತ ಸಂವಿಧಾನ ಸರ್ವರಿಗೂ ಸಮಬಾಳು ಸಮಪಾಲು ಅವಕಾಶ ನೀಡಿದೆ ಇಂದು ಪ್ರತಿಯೋಬ್ಬರಿಗೂ ತಮ್ಮದೆಯಾದ ಘನತೆ, ಗೌರವ ಇದೆ. ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡಗಳು ಇಂದು ಸಾಮಾಜಿಕ ,ಆರ್ಥಿಕ, ಶೈಕ್ಷಣಿಕ ಮೇಲ್ಪಂಕ್ತಿಗೆ ಬರಬೇಕು ಇಂದು ಗ್ರಾಮೀಣ ಭಾಗಗಳಲ್ಲಿ ಸಮಸ್ಯಗಳು ಏನಾದರೂ ಇದ್ದರೆ ಅಧಿಕಾರಿಗಳು  ಕೂಡಲೆ ಕ್ರಮಕೈಗೊಳ್ಳಿ. ದೌರ್ಜನ್ಯ ತಡೆ ಉದ್ದೇಶ ಸಾಮಾನ್ಯ ಜನರ ಮೇಲೆ ಆಗುವ ಕಿರುಕುಳ ತಪ್ಪಿಸುವುದು ಎಂದು ಅರ್ಥ  ದೌರ್ಜನ್ಯ ತಡೆಗೆ ಸರಕಾರಿ ಇಲಾಖೆಯೊಂದಿಗೆ  ದೌರ್ಜನ್ಯ ತಡೆ ಸಮಿತಿ ಇರುವದರಿಂದ ಅಧ್ಯಕ್ಷರು ಹಾಗೂ ದೌರ್ಜನ್ಯ ಸಮಿತಿ ಎಲ್ಲಾ ಪದಾಧಿಕಾರಿಗಳು ನಮ್ಮೋಂದಿಗೆ ಸಹಕರಿಸಿ ಎಂದು  ಸಭೆಯಲ್ಲಿ ತಿಳಿಸಿದರು.  ದೌರ್ಜನ್ಯ ಸಮಿತಿ ಅಧ್ಯಕ್ಷ ಬಾಬು ಗುಡಮಿ ಮಾತನಾಡಿ ಎಸ್ಸಿ .ಎಸ್ಟಿ ಕುಂದು ಕೊರತೆ ಸಾಕಷ್ಟು ಇವೆ ತಾಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ಹೋಟೇಲ್‌ಗಳಲ್ಲಿ ಸಾಮೋಹಿಕ ಚಹಾ ಕುಡಿಯಬೇಕಾದರೆ ಇಂದಿಗೂ ಅಸ್ಪçಶ್ಯತೆ ಆಚರಣೆ ಜೀವಂತ , ಕ್ಷರ ಮಾಡಿಸಿಕೊಳ್ಳುವದು  ಕನಸಿನ ಮಾತಾಗಿದ...

ರಾಜ್ಯ ಮಟ್ಟದ ಸ್ಪೂರ್ತಿದಾಯಕ ವ್ಯಕ್ತಿ ಪ್ರಶೇಸ್ತಿ

ಇಮೇಜ್
 ಇಂಡಿ- ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ  ಶಾಖೆ, ಕೋರವಾರ  ಡಾ.ಬಿ.ಆರ್ ಅಂಬೇಡ್ಕರವರ   ಜಯಂತಿ ಪ್ರಯುಕ್ತ  ರಾಜ್ಯ ಮಟ್ಟದ ಸ್ಪೂರ್ತಿದಾಯಕ ವ್ಯಕ್ತಿ ಪ್ರಶೇಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಣ, ಸಾಹಿತ್ಯ, ನೆಲ, ಜಲ,ಭಾಷೆ ,ಸಂಸ್ಕೃತಿ ಮೊದಲಾದ ಕ್ಷೇತ್ರಗಳಲ್ಲಿ ಗಣನಿಯ ಸೇವೆ ಸಲ್ಲಿಸಿದ ಸಾಧಕರನ್ನು ಜ್ಞಾನ, ಪ್ರೀತಿಯನ್ನು ಗುರುತಿಸಿ ಇವರ ಸಾಹಿತಿಕ ಕ್ಷೇತ್ರದ ಸಾಧನೆಗೆ  ರಾಜ್ಯ ಮಟ್ಟದ ಸ್ಪೂರ್ತಿದಾಯಕ ವ್ಯಕ್ತಿ ಎಂದು ಇಂಡಿ ಪಟ್ಟಣದ ಕರ್ನಾಟಕ ಪ್ರೌಢ ಶಾಲೆಯ  ಶಿಕ್ಷಕ ಮರಲಿಂಗಪ್ಪ ಹೊರಗಿನಮನಿ ಇವರನ್ನು ಶಾಲು ಹೋದಿಸಿ ನೆನಪಿನ ಕಾಣಿಕೆ ಹಾಗೂ ಪ್ರಶೇಸ್ತಿ ಪತ್ರ ನೀಡಿ ಗೌರವಿಸಲಾಯಿತು.  ಪೋಟೋಕ್ಯಪ್ಸನ್ ೨೯ಇಂಡಿ೦೧_  ಮರಲಿಂಗಪ್ಪ  ಹೊರಗಿನಮನಿ ಇವರ ಭಾವಚಿತ್ರ.

ಪಹಲ್‌ಗಾಂನಲ್ಲಿ ನಡೆದ ಉಗ್ರವಾದಿ ದಾಳಿಗೆ ಖಂಡನೆ ವ್ಯಕ್ತಪಡಿಸಿದ ಇಂಡಿ ಯೂತ್ ಕಾವರೇಜ್ ಸಂಘಟನೆ.

ಇಮೇಜ್
 ಇಂಡಿ.  ಪಹಲ್‌ಗಾಂನಲ್ಲಿ ನಡೆದ ಉಗ್ರವಾದಿ ದಾಳಿಗೆ ಖಂಡನೆ ವ್ಯಕ್ತಪಡಿಸಿದ ಇಂಡಿ ಯೂತ್ ಕಾವರೇಜ್ ಸಂಘಟನೆ, ಈ ಉಗ್ರ ಕೃತ್ಯಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.  ಈ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ಶಹೀದರಿಗೆ ಗೌರವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಮುಖಂಡರು "ಭಾರತದ ಭದ್ರತೆ ಮತ್ತು ಶಾಂತಿಯು ನಮ್ಮ ಪ್ರಥಮ ಪ್ರಧಾನತೆಯಾಗಿದೆ. ಉಗ್ರರಿಗೆ ತಕ್ಕ ಪಾಠ ಕಲಿಸುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ. ಉಗ್ರವಾದಿ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಹೀದರಾದ ನಮ್ಮ ಸಹೋದರರಿಗೆ  ನ್ಯಾಯಾಸಿಗಬೇಕು ಎಂದು ಹೇಳಿದರು. ಯುವಕರು ಕೇಂದ್ರ ಸರ್ಕಾರ ಮತ್ತು ರಕ್ಷಣಾ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದು, ಭವಿಷ್ಯದಲ್ಲಿ ಇಂಥಹ ದಾಳೆಗಳನ್ನು ತಪ್ಪಿಸಲು ಗಟ್ಟಿಯಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು ಮತ್ತು ಭದ್ರತಾ ವ್ಯವಸ್ಥೆ ಮತ್ತಷ್ಟು ಬಲಪಡಿಸಲು ಮನವಿ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಯುವಕರ ಹೆಚ್ಚಿನ ಹಾಜರಾತಿ ಕಂಡುಬಂದಿತು ಮತ್ತು ದೇಶಭಕ್ತಿಯಿಂದ ತುಂಬಿದ ಘೋಷಣೆಗಳೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಯಿತು. ಹೀಗೆ, ದೇಶದ ಏಕತೆ ಮತ್ತು ಭದ್ರತೆಗೆ ಬೆಂಬಲ ಸೂಚಿಸುವ ಮೂಲಕ, ಇಂಡಿಯಾ ಯೂತ್ ಕಾನ್ವರ್ಜ್ ಸಂಘಟನೆ ಒಂದು ಶಕ್ತಿಶಾಲಿ ಸಂದೇಶವನ್ನು ನೀಡಿದೆ. ಈ ಸಂದರ್ಭ...

ಮೇ 5 ರಂದು ಇಂಡಿ ತಾಲೂಕಾ ಬಂದಗೆ ಕರವೇ ಹಾಗೂ ರೈತರ ವತಿಯಿಂದ ಹೋರಾಟ.

ಇಮೇಜ್
ಮೇ 5 ರಂದು ಇಂಡಿ ನಗರ ಹಾಗೂ ನಾದ ಕೆಡಿ ಹಾಗೂ ತಾಂಬಾ ಝಳಕಿ ಹಾಗೂ ಸಾಲೋಟಗಿ ಬಂದ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದ ಕರವೇ ತಾಲೂಕಾ ಅಧ್ಯಕ್ಷ ಬಾಳು ಮೂಳಜಿ. ಇಂಡಿ ತಾಲೂಕಿನ ಎಲ್ಲಾ ಶಾಖಾ ಕಾಲುವೆ ಹಾಗೂ ಭೀಮಾ ನದಿಗೆ ಹಾಗೂ ಹಳ್ಳಗಳಿಗೆ ನೀರು ಹರಿಸಬೇಕು‌  ತೊಗರಿ ಬೆಳೆ ಹಾನಿಯಾಗಿದ್ದು, ರೈತರಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಪರಿಹಾರ ನೀಡಬೇಕು. ಹಾಗೂ ವಿಮಾ ಕಂಪನಿಗಳಿಂದಲು ಪರಿಹಾರ ನೀಡಬೇಕು ಎಂದು ಕರವೇ ಹಾಗೂ ರೈತರ ವತಿಯಿಂದ. ಇಂಡಿ ನಗರದಲ್ಲಿ 07-04-2025 ರಂದು ಇಂಡಿ ಬಸವೇಶ್ವರ ವೃತ್ತದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಾಲ್ಕು ದಿನಗಳ ಕಾಲ ರಾತ್ರಿ ಹಗಲು ಹೋರಾಟ ಮಾಡಿದ್ದೇವೆ. ಮಾನ್ಯ ಉಪವಿಭಾಗ ಅಧಿಕಾರಿಗಳು ನಮ್ಮ ಬೇಡಿಕೆಗೆ ಸರ್ಕಾರದ ಜೊತೆ ಚರ್ಚೆ ಮಾಡಿ ಕೂಡಲೇ ಬೇಡಿಕೆ ಈಡೇರಿಸುತ್ತೆವೆ ಎಂದು ನಮ್ಮ ಹೋರಾಟದ ವೇದಿಕೆಗೆ ಬಂದು ಹೇಳಿದ್ದಿರಿ ಅಧಿಕಾರಿಗಳು ಇನ್ನೂ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲಾ ಇದು ನೋವಿನ ಸಂಗತಿ ನಾವು ಅನ್ನದಾತರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತೇವೆ. ದಿನಾಂಕ:05-05-2025 ರಂದು ಇಂಡಿ ತಾಲೂಕ ಬಂದ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಪ್ರತಿಕಾ ಗೋಷ್ಠಿಯಲ್ಲಿ ತಿಳಿಸಿದರು. ನಮ್ಮ ಬೇಡಿಕಗಳು ಕೂಡಲೇ  ಈಡೆರಿಸಬೇಕೆಂದು ಆಗ್ರಹ. ಹಾನಿಯಾದ ತೂಗರಿ ಬೇಳೆಗೆ ಸರ್ಕಾರ ತನ್ನ ಖಜಾನೆಯಿಂದ ವಿಷೇಶ ಪ್ಯಾಕೇಜ್ ಘೋಷಣೆ ಮಾಡಿ ಪ್ರತಿ ಎಕರೇಗೆ 25000 ಯಂತೆ ಪರಿಹಾರ ನೀಡಬೇಕು ಹಾಗೂ ನಮ್ಮ ಇಂಡಿ ತ...

“ಈ ದಿನಗಳಲ್ಲಿ, ವಾಣಿಜ್ಯ ಕ್ಷೇತ್ರವು ಬೇರೆ ಯಾವುದೇ ಕ್ಷೇತ್ರಗಳಿಗಿಂತ ಕಡಿಮೆ ಇಲ್ಲ. ಡಾ.ವಿವೇಕಾನಂದ ಉಘಾಡೆ

ಇಮೇಜ್
 ‘ವಾಣಿಜ್ಯ ಪದವೀಧರರಿಗೆ ಉದ್ಯೋಗಾವಕಾಶ’ ವಿಶೇಷ ಉಪನ್ಯಾಸ ಕಾರ್ಯಕ್ರಮದ ವರದಿ         ದಿನಾಂಕ 22-04-2025 ರಂದು ಇಂಡಿ ಪಟ್ಟಣದ ಎಸ್.ಎಸ್.ವಿ.ವಿ.ಸಂಘದ ಶ್ರೀ ಜಿ.ಆರ್.ಗಾಂಧಿ ಕಲಾ, ಶ್ರೀ ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಶ್ರೀ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದ ವಾಣಿಜ್ಯಶಾಸ್ತç ವಿಭಾಗದ ಅಡಿಯಲ್ಲಿ ‘ವಾಣಿಜ್ಯ ಪದವೀಧರರಿಗೆ ಉದ್ಯೋಗಾವಕಾಶ’ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.     ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ವಿವೇಕಾನಂದ ಉಘಾಡೆ, ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಝಳಕಿ, ಇವರು  ಮಾತನಾಡುತ್ತಾ “ಈ ದಿನಗಳಲ್ಲಿ, ವಾಣಿಜ್ಯ ಕ್ಷೇತ್ರವು ಬೇರೆ ಯಾವುದೇ ಕ್ಷೇತ್ರಗಳಿಗಿಂತ ಕಡಿಮೆ ಇಲ್ಲ. ಬಿ.ಕಾಂ., ಬಿ.ಬಿಎ, ಎಂ.ಕಾA ಮುಂತಾದ ಪದವಿಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಅನೇಕ ರೀತಿಯ ಉದ್ಯೋಗಾವಕಾಶಗಳು ಲಭ್ಯವಿವೆ. ಬ್ಯಾಂಕಿAಗ್, ಲೆಕ್ಕಪತ್ರಿಕೆ, ಹಣ ಮಾರಾಟ, ಮಾನವ ಸಂಪತ್ತು, ಭದ್ರತಾ ಮಾರುಕಟ್ಟೆ, ವಿಮಾ ಕ್ಷೇತ್ರ, ನಿಕಾಯ ವಾಣಿಜ್ಯ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಸಾವಿರಾರು ಉದ್ಯೋಗ ಅವಕಾಶಗಳು ಬಾಗಿಲಲ್ಲಿ ನಿಂತಿವೆ. ಇತ್ತೀಚಿನ ದಿನಗಳಲ್ಲಿ ಸ್ಟಾರ್ಟ್ಅಪ್‌ಗಳು ಹಾಗೂ ಫ್ರೀಲಾನ್ಸಿಂಗ್ ಆಧಾರಿತ ಉದ್ಯೋಗಗಳು ಕೂಡ ಭರದಿಂದ ಬೆಳೆಯುತ್ತಿವೆ. ವಾಣಿಜ್ಯ ಪದವೀಧರರು ತಮ್ಮ ಉತ್ಸಾಹ, ಕಠಿಣ ಪರಿಶ್ರಮ ...

ಉರ್ದು ಭಾಷೆಯು ಭಾರತದಲ್ಲಿ ಜನ್ಮತಾಳಿದ್ದು, ಇದನ್ನು ಯಾವುದೇ ಧರ್ಮದೊಂದಿಗೆ ಸಂಬಂಧಿಸುವುದು ತಪ್ಪು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.

ಇಮೇಜ್
  ನವದೆಹಲಿ: ಉರ್ದು ಭಾಷೆಯು ಭಾರತದಲ್ಲಿ ಜನ್ಮತಾಳಿದ್ದು, ಇದನ್ನು ಯಾವುದೇ ಧರ್ಮದೊಂದಿಗೆ ಸಂಬಂಧಿಸುವುದು ತಪ್ಪು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಕೋರ್ಟ್ ಇದೇ ವೇಳೆ ಉರ್ದು ಮತ್ತು ಹಿಂದಿ ಭಾಷೆಗಳ ಐತಿಹಾಸಿಕ ಸಂಬಂಧವನ್ನು ಉಲ್ಲೇಖಿಸಿತು. ಈ ಎರಡೂ ಭಾಷೆಗಳು ಒಂದೇ ಮೂಲದಿಂದ ಬೆಳೆದವು. ಆದರೆ ಕಾಲಾಂತರದಲ್ಲಿ ಧಾರ್ಮಿಕ ಗುರುತುಗಳಿಂದ ಬೇರ್ಪಡಿಸಲ್ಪಟ್ಟವು. ಹಿಂದಿಯನ್ನು ಹಿಂದೂಗಳ ಭಾಷೆ ಮತ್ತು ಉರ್ದುವನ್ನು ಮುಸ್ಲಿಮರ ಭಾಷೆ ಎಂದು ಗುರುತಿಸುವುದು ವಾಸ್ತವದಿಂದ ದೂರವಾದ ದಾರಿ ಎಂದು ಕೋರ್ಟ್ ವಿಷಾದ ವ್ಯಕ್ತಪಡಿಸಿತು. ಪಾತೂರ್ ಪುರಸಭೆಯ ಸೂಚನಾ ಫಲಕದಲ್ಲಿ ಉರ್ದು 1956ರಿಂದಲೂ ಬಳಕೆಯಲ್ಲಿದೆ ಮತ್ತು ಸ್ಥಳೀಯ ಜನಸಮುದಾಯದ ಗಣನೀಯ ಭಾಗವು ಈ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತದೆ ಎಂದು ಕೋರ್ಟ್ ಗಮನಿಸಿದೆ. ಪುರಸಭೆಯು ಸ್ಥಳೀಯ ಜನರ ದೈನಂದಿನ ಅಗತ್ಯಗಳನ್ನು ಪೂರೈಸುವ ಉದ್ದೇಶ ಹೊಂದಿದೆ. ಒಂದು ವೇಳೆ ಜನರ ಗುಂಪು ಉರ್ದು ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ, ಅದನ್ನು ಮರಾಠಿಯ ಜೊತೆಗೆ ಸೂಚನಾ ಫಲಕದಲ್ಲಿ ಬಳಸುವುದಕ್ಕೆ ಯಾವುದೇ ಆಕ್ಷೇಪವಿರಬಾರದು ಎಂದು ಕೋರ್ಟ್ ತಿಳಿಸಿದೆ.

ರೇವಣಸಿದ್ಧೇಶ್ವರ ಏತನೀರಾವರಿ ಓಪನ್ ಕಾಲುವೆ ಮೂಲಕ ನೀರು ಹರಿಸಲು ಮನವಿ

ಇಮೇಜ್
 ರೇವಣಸಿದ್ಧೇಶ್ವರ ಏತನೀರಾವರಿ ಓಪನ್ ಕಾಲುವೆ ಮೂಲಕ ನೀರು ಹರಿಸಲು ಮನವಿ ಇಂಡಿ.ರೇವಣಸಿದ್ದೇಶ್ವರ ಏತನೀರಾವರಿಯ ಯೋಜನೆಯ ಕಾಮಗಾರಿ ಈ ಗ್ರಾಮಗಳಾದ ಕೋಳ್ಳೂರಗಿ, ಹೊರ್ತಿ,ಹಳಗುಣಕಿ,ಬಬಲಾದ, ಹಂಜಗಿ,ನಿಂಬಾಳ, ಝಳಕಿ,ಜವೂರ,ಭತಗುಣಕಿ,ಅಂಜುಟಗಿ, ಬೂದಿಹಾಳ,ಚೌಡಿಹಾಳ, ನಿಂಬಾಳ,ದೇಗಿನಾಳ,ತಡವಲಗಾ,ಬಸನಾಳ,ಅಗಸನಾಳ,ಕೂಡಗಿ, ಹಂಜಗಿ,ಕಪನಿಂಬರಗಿ,ಗುಂದವಾನ, ಮುಂತಾದ ಗ್ರಾಮಗಳಿಗೆ ಕೇವಲ ಪೈಪಲೈನ ಮೂಲಕ ಕಾಮಗಾರಿಗ ಪ್ರಾರಂಭಿಸಿದ್ದಾರೆ.ಆದರೆ ಇದರಿಂದ ಪ್ರಯೋಜನವಿಲ್ಲ ಆದ್ದರಿಂದ ಓಪನ್ ಕಾಲುವೆ ಮೂಲಕ ಕಾಮಗಾರಿ ಪ್ರಾರಂಭಸಿ ನೀರು ಹರಿಸಿದರೆ ಹಳ್ಳ,ಕೋಳ್ಳಗಳು, ಹಾಗೂ ಬತ್ತಿದ ಬಾವಿಗಳಿಗೆ ಅಂತರ ಜಲ್ ಮಟ್ಟ ಹೆಚ್ಚಾಗಿ ರೈತಾಪಿ ವರ್ಗಕ್ಕೆ ಅನುಕೂಲವಾಗುವದು ಕಾರಣ ಇಂದು ಜೆಡಿಎಸ್ ಮುಖಂಡರಾದ ಬಿ.ಡಿ.ಪಾಟೀಲರ ನೇತೃತ್ವದಲ್ಲಿ ರೈತಾಪಿ ವರ್ಗ ಇಂದು ವಿಜಾಪೂರ ಸಂಸದರಾದ ಶ್ರೀ ರಮೇಶ್  ಜೀಗಜಿಣಗಿ ಯವರಿಗೆ ರೈತ ನಿಯೋಗ ಭೇಟಿ ನೀಡಿ ವಾಸ್ತವ ಸಮಸ್ಯೆ ಮನವರಿಕೆ ಮಾಡಲಾಗಿತ್ತು.ಸಂಸದರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.ಇದೆ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಮರೇಪ್ಪ ಗಿರಣಿವಡ್ಡರ,ಸಿದ್ದಾರಾಮ ನಿಚ್ಚಳ, ಸುಭಾಷ್ ಅಚ್ಚೇಗಾರ ,ಬಾಬಾ ಹಂಚಿನಾಳ,ಮುಂತಾದ ರೈತರು ಉಪಸ್ಥಿತರಿದ್ದರು.

ಇಂಡಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ, ಪತ್ತಿನ ಸಹಕಾರಿ ಸಂಘ ಹಾಗೂ ಸರಕಾರಿ ನೌಕರರ ಸಂಘದ ಸಹಯೋಗದಲ್ಲಿ ಆತ್ಮೀಯ ಸನ್ಮಾನ ಕಾರ್ಯಕ್ರಮ

ಇಮೇಜ್
 ಗೌರವ ಡಾಕ್ಟರೆಟ್ ಪ್ರಶಸ್ತಿಗೆ ಭಾಜನರಾದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀ ಎಂ ಎಂ ವಾಲಿಕಾರ್ ಸರ್.  ಇಂಡಿ ತಾಲೂಕು  ಸರಕಾರಿ ನೌಕರರ ಭವನದಲ್ಲಿ  ಡಾ ಸರ್ವಪಲ್ಲಿ ರಾಧಾಕೃಷ್ಣ ಸೇವಾಭಿವೃದ್ಧಿ ಸಂಘದಿಂದ ಕೊಡಮಾಡಲಾಗುವ ಗೌರವ ಡಾಕ್ಟರೆಟ್ ಪ್ರಶಸ್ತಿಯನ್ನು ವಿಜಯಪುರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀ ಎಂ ಎಂ ವಾಲಿಕಾರ ಸರ್ ಅವರ ಕಲೆ , ಸಾಹಿತ್ಯ,ಕಿರುನಾಟಕಗಳ ರಚನೆ, ನಟನೆ,ಶಿಕ್ಷಣ ಕ್ಷೇತ್ರದಲ್ಲಿ ಅವರ ಸೇವೆಯನ್ನು ಗುರುತಿಸಿ "ಗೌರವ ಡಾಕ್ಟರೆಟ್" ಪ್ರಶಸ್ತಿ ಲಭಿಸಿರುವದಕ್ಕೆ ಇಂಡಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ, ಪತ್ತಿನ ಸಹಕಾರಿ ಸಂಘ ಹಾಗೂ ಸರಕಾರಿ ನೌಕರರ ಸಂಘದ ಸಹಯೋಗದಲ್ಲಿ ಆತ್ಮೀಯ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಸಂಧರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷರಾದ ವಾಯ್ ಟಿ ಪಾಟೀಲ್, GOCC ಬ್ಯಾಂಕಿನ ನಿರ್ದೇಶಕರಾದ ಅಲ್ಲಾಬಕ್ಷ ವಾಲಿಕಾರ, ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪಬ್ಬು ಚಾಂದಕವಟೆ, ಬೆಳಗಾವಿ ವಿಭಾಗಿಯ ಉಪಾಧ್ಯಕ್ಷರಾದ ಎಸ್ ವ್ಹಿ ಹರಳಯ್ಯ, ಜಗು ಚವಡಿಹಾಳ, ನೌಕರರ ಸಂಘದ ಪರಿಷತ್ ಸದಸ್ಯರಾದ ಬಸು ಮೇತ್ರಿ, ಎಸ್ ಸಿ /ಎಸ್ ಟಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಬಿ ಎಂ ವಠಾರ,ಇಂಡಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಕಾಂತು ಇಂಡಿ, ಭಾಷ ಕುಮಸಗಿ, ಸುರೇಶ ಚವ್ಹಾಣ, ಬಿ ಎನ್ ಜಮಾಧಾರ, ಬುರಾಣ ಸುತಾರ ...

ಶೋಷಿತರ ಏಳಿಗೆಯನ್ನೇ ಜೀವನದ ಗುರಿಯಾಗಿಸಿಕೊಂಡಿದ್ದ ಮಹಾನ್ ಮಾನವತಾವಾದಿ ಸಂವಿದಾನ ಶಿಲ್ಪಿ ಡಾ. ಬಿ.ಆರ್. ಅಂಬೇಡಕರರು. ಅನುರಾದಾ ವಸ್ತ್ರದ

ಇಮೇಜ್
 ಇಂಡಿ :     ಶೋಷಿತರ ಏಳಿಗೆಯನ್ನೇ ಜೀವನದ ಗುರಿಯಾಗಿಸಿಕೊಂಡಿದ್ದ ಮಹಾನ್ ಮಾನವತಾವಾದಿ ಸಂವಿದಾನ ಶಿಲ್ಪಿ ಡಾ. ಬಿ.ಆರ್. ಅಂಬೇಡಕರರು ಸಾಮಾಜಿಕ ಸಮಾನತೆ ಮತ್ತು ಅಸ್ಪೃಶೃತಾ ನಿವಾರಣೆಗಾಗಿ ಹೋರಾಡಿದ ಭಾರತೀಯ ಅಗ್ರರಲ್ಲಿ ಬಾಬಾ ಸಾಹೇಬ ಅಂಬೇಡಕರ ಕೂಡ ಒಬ್ಬರು ಎಂದು ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು. ಪಟ್ಟಣದ ಗುರುಭವನ ಸಭಾಭವನದಲ್ಲಿ ಡಾ. ಬಿ.ಆರ್ ಅಂಬೇಡಕರರವರ ಜನ್ಮ ದಿನದ ನಿಮಿತ್ಯ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು. ಉಪನ್ಯಾಸ ನೀಡಿದ ನಾದ ಪ್ರೌಢಶಾಲೆಯ  ಸಹಶಿಕ್ಷಕ  ಆರ್.ಬಿ.ಬಿರಾದಾರ ಮಾತನಾಡಿ ಶಿಕ್ಷಣ ಹಕ್ಕು, ಉದ್ಯೋಗ ಹಕ್ಕು, ಮಾಹಿತಿ ಹಕ್ಕು, ಅಹಾರ ಭದ್ರತೆಯ ಹಕ್ಕು, ಬಾಳುವ ಹಕ್ಕು, ಆದಿವಾಸಿಗಳಿಗೆ ಸಂಪನ್ಮೂಲ ಸಂಗ್ರಹಿಸುವ ಹಕ್ಕು,  ಈ ಎಲ್ಲದರ ಹಿಂದೆ ಕೆಲಸ ಮಾಡಿರುವದು ಅಂಬೇಡಕರರವರು, ಮಹಿಳೆಯರು, ದಲಿತರು, ಶೂದ್ರರು, ಕೃಷಿಕರು, ಕಾರ್ಮಿಕರು, ಸೇರಿದಂತೆ ಎಲ್ಲ ಶ್ರೀ ಸಾಮಾನ್ಯರ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಮಾತನಾಡಿದವರು ಅಂಬೇಡಕರರವರು, ಕೃಷಿ ಬದುಕು, ಭೂ ಒಡೆತನ, ನೀರಾವರಿ ಕೈಗಾರಿಕೆಗಳ ಸ್ಥಿತಿಗತಿ ಬಗ್ಗೆ ಅಂಬೆಡಕರರವರು ಸ್ವಾತಂತ್ರ ಪೂರ್ವದಲ್ಲಿಯೇ ಚಿಂತಿಸಿದ್ದಾರೆ. ಈ ಎಲ್ಲ ಒಳಗೊಂಡಿರುವ ಅರ್ಥಶಾಸ್ತçದ ಬಗ್ಗೆಯೂ ಬಾಬಾ ಸಾಹೇಬರು ಪ್ರಗತಿಪರ ವಿಚಾರಧಾರೆ ಮುಂದಿಟ್ಟಿದ್ದಾರೆ ಎಂದರು.  ರಮೇಶ ನಿಂಬಾಳಕರರವರು ಮಾತನಾಡಿ ಭಾರತದ ಸಂವಿಧಾನ ನಿರ್ಮಾತೃ ಅಂಬೇಡಕರ...

ಕಾಂಗ್ರಸ್ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ ಕಾಂಗ್ರೆಸ್ ಪಕ್ಷದ ದುರಾಡಳಿತ ಖಂಡಿಸಿ ವಿಜಯಪುರದಲ್ಲಿ ಏ.17 ರಂದು ಜನಾಕ್ರೋಶ ಸಭೆಯನ್ನು ಹಮ್ಮಿಕೊಂಡಿದ್ದು. ವಿವೇಕ ಡಬ್ಬಿ

ಇಮೇಜ್
 ಇಂಡಿ :   ಕಾಂಗ್ರೆಸ್ ಪಕ್ಷದ ದುರಾಡಳಿತ ಖಂಡಿಸಿ ವಿಜಯಪುರದಲ್ಲಿ ಏ.17 ರಂದು ಜನಾಕ್ರೋಶ ಸಭೆಯನ್ನು ಹಮ್ಮಿಕೊಂಡಿದ್ದು ಇಂಡಿ ತಾಲೂಕಿನ ಪ್ರತಿ ಬೂತ ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ವಿವೇಕ ಡಬ್ಬಿ ಹೇಳಿದರು. ಪಟ್ಟಣದ ಶ್ರೀ ಸತ್ಯ ನಾರಾಯಣ ದೇವಸ್ಥಾನದ ಆವರಣದಲ್ಲಿ ನಡೆದ ಜನಾಕ್ರೋಶ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.  ಕಾಂಗ್ರಸ್ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಮಹಿಳೆಯರಿಗೆ ಉಚಿತ ಬಸ್ಸ ಪ್ರವಾಸದಿಂದ ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತಿದೆ. ಸಾಮಾಜಿಕ ಇಲಾಖೆಯ ೨೮ ಸಾವಿರ ಕೋಟಿ ಅನುದಾನದಲ್ಲಿ ೧೮ ಸಾವಿರ ಕೋಟಿ ರೂ ಗ್ಯಾರಂಟಿಗೆ ನೀಡಿದ್ದಾರೆ. ಇವೆಲ್ಲವನ್ನು ಪರಿಗಣಿಸಿ ವಿಜಯೇಂದ್ರ ನೇತೃತ್ವದಲ್ಲಿ ಜನಾಕ್ರೋಶ ಸಭೆ ವಿಜಯಪುರದಲ್ಲಿ ನಡೆಯುತ್ತಿದೆ ಎಂದರು. ಇಂಡಿ ಮಂಡಲ ಅದ್ಯಕ್ಷ ಮಲ್ಲಿಕಾರ್ಜುನ ಕಿವಡೆ ಮಾತನಾಡಿ ಇಂಡಿಯಿಂದ ಹೆಚ್ಚು ಕಾರ್ಯಕರ್ತರು ಜನಾಕ್ರೋಶ ಸಭೆಯಲ್ಲಿ ಪಾಲ್ಗೊಳ್ಳಬೇಕು. ಪ್ರತಿ ಬೂತ ಮಟ್ಟದಲ್ಲಿ ಕಾರ್ಯಕರ್ತರನ್ನು ತರಬೇಕು ಎಂದರು.ಈಗಾಗಲೇ ಮೈಸೂರು, ಶಿವಮೊಗಾ ದಲ್ಲಿ ಯಶಸ್ವಿಯಾಗಿದ್ದು ವಿಜಯಪುರ ಕಾರ್ಯಕ್ರಮ ಯಶಸ್ವಿಗೊಳಿಸಲು ಕೇಳಿಕೊಂಡರು.  ಮುಳುಗೌಡ ಪಾಟೀಲ ,ಕಾಸುಗೌಡ ಬಿರಾದಾರ,ಶಂಕರಗೌಡ ಪಾಟೀಲ, ದೇವೆಂದ್ರ ಕುಂಬಾರ ಮಾತನಾಡಿ ಕಾಂಗ್ರೆಸ ಸರಕಾರ ಎಲ್ಲ ಬೆಳವಣೆಗೆಗಳಿಗೂ ಕೇಂದ್ರದ ಕಡೆಗೆ ಬೊಟ್ಟು ಮಾಡುವದನ್ನು ಬಿಟ್ಟು ಅಭಿವೃದ...

ಕಾಶಪ್ಪನವರ ಹೇಳಿಕೆ ಸಮಾಜಕ್ಕೆ ನೋವುಂಟೆ ಮಾಡಿದೆ. : ವಿ.ಎಚ್.ಬಿರಾದಾರ

ಇಮೇಜ್
 ಇಂಡಿ :   ಪಂಚಮಸಾಲಿ ಸಮಾಜಕ್ಕೆ ಅದರದೇ ಆದ ಟ್ರಸ್ಟ ಮಾಡಲಾಗಿದೆ. ಅದಕ್ಕೆ ಶಿಷ್ಟಾಚಾರ ಇದೆ. ಅದನ್ನು ಉಲ್ಲಂಘಿಸಿದವರ ಮೇಲೆ ಕ್ರಮ ಕೈಕೊಳ್ಳಲಾಗುವದು ಎಂದು ಹೇಳಿರುವ ಕಾಸಪ್ಪನವರ ಹೇಳಿಕೆಯನ್ನು ಇಂಡಿ ತಾಲೂಕಾ ಪಂಚಮಸಾಲಿ ಸಂಘದ ತಾಲೂಕಾ ಅಧ್ಯಕ್ಷ ವಿ.ಎಚ್.ಬಿರಾದಾರ ಖಂಡಿಸಿದ್ದಾರೆ. ಇಂಡಿಯ ಅಮರ ಇಂಟರ್ ನ್ಯಾಶನಲ್ ಹೋಟೆಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೂಡಲ ಸಂಗಮದಲ್ಲಿ ಟ್ರಸ್ಟ ಎಂಬುದು ಇದೆ. ಆದರೆ ಮಂಡಳಿಯ ಸದಸ್ಯರು ಬರುವದೇ ಇಲ್ಲ. ಮತ್ತು ಟ್ರಸ್ಟಕ್ಕೆ ಸೇರಬೇಕಾದ ಆಸ್ತಿ ಲೂಟಿಸಿದ್ದಾರೆ.  ಕಾಶಪ್ಪನವರ ಹೇಳಿಕೆ ಸಮಾಜಕ್ಕೆ ನೋವುಂಟೆ ಮಾಡಿದೆ. ಜಯ ಮೃತ್ಯುಂಜಯ ಶ್ರೀಗಳು ಕಣ್ಣಿರು ಹಾಕಿರುವದು ಎಲ್ಲರಿಗೂ ನೋವು ತಂದಿದ್ದು ಪ್ರತಿ ಹನಿಯ ಬೆಲೆ ತೆತ್ತಬೇಕಾಗುತ್ತದೆ. ಈ ದಿಶೆಯಲ್ಲಿ ಏ. ೨೦ ರಂದು ೩ ಗಂಟೆಗೆ ಕೂಡಲ ಸಂಗಮದಲ್ಲಿ ಸಭೆಯನ್ನು ಕರೆದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಂಚಮಸಾಲಿ ಜನಾಂಗ ಸಮಾಜ ಬಾಂಧವರು ಸೇರಿ ತಕ್ಕ ಉತ್ತರ ಕೊಡಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಾಳು ಮುಳಜಿ, ಶರಣು ಬಂಡಿ, ಚಿದುಗೌಡ ಬಿರಾದಾರಸೋಮು ದೇವರ,ರಮೇಶ ಬಿರಾದಾರ, ವಿಜುಗೌಡ ಬಿರಾದಾರ ಮತ್ತಿತರಿದ್ದರು. ಇಂಡಿಯಲ್ಲಿ ನಡೆದ ಪಂಚಮಸಾಲಿ ಸಮಾಜದ ಪತ್ರಿಕಾಗೋಷ್ಠಿಯಲ್ಲಿ ವಿ.ಎಚ್. ಬಿರಾದಾರ ಮಾತನಾಡಿದರು.

ಶ್ರೀ ಎಂ ಎಂ ವಾಲಿಕಾರ ಶಿಕ್ಷಕರಿಗೆ ಗೌರವದ ಸನ್ಮಾನ

ಇಮೇಜ್
 ಶ್ರೀ ಎಂ ಎಂ ವಾಲಿಕಾರ ಶಿಕ್ಷಕರಿಗೆ ಗೌರವದ ಸನ್ಮಾನ ಶ್ರೀ ಎಂ ಎಂ ವಾಲಿಕಾರ ಶಿಕ್ಷಕರು ಸರ್ಕಾರಿ ಹೆಣ್ಣು ಮಕ್ಕಳ ಶಾಸಕರ ಮಾದರಿ ಪ್ರಾಥಮಿಕ ಶಾಲೆ ತಾಂಬಾ ತಾ.ಇಂಡಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿಜಯಪುರದ ಜಿಲ್ಲಾ ಉಪಾಧ್ಯಕ್ಷರು ಇವರಿಗೆ ಡಾಕ್ಟರೇಟ್ ಪದವಿಯನ್ನು ಪಡೆದಿರುವುದಕ್ಕಾಗಿ, ತಾಂಬಾ ಹಾಗೂ ಸುತ್ತಮುತ್ತಲಿನ ಗ್ರಾಮದ ಶಾಲೆಯ ಗುರುಬಳಗದ ವತಿಯಿಂದ ಸನ್ಮಾನಿಸಿ, ಹೃದಯಸ್ಪರ್ಶಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.  ಶ್ರೀ ಎಂ ಎಂ ವಾಲಿಕಾರ ಗುರುಗಳು ವೃತ್ತಿಯಿಂದ ಶಿಕ್ಷಕರಾಗಿದ್ದು ಪ್ರವೃತ್ತಿಯಿಂದ ರಂಗಭೂಮಿ ಕಲಾವಿದರಾಗಿ ಅದರಲ್ಲೂ ವಿಶೇಷವಾಗಿ ಖಳನಾಯಕನ ಪಾತ್ರಕ್ಕೆ ಹೇಳಿ ಮಾಡಿಸಿದ ವ್ಯಕ್ತಿತ್ವ ಇವರಲ್ಲಿದೆ."ಬಡವ ಬದುಕಲೇಬೇಕು"ಎಂಬ ಸುಂದರ ಸಾಮಾಜಿಕ ನಾಟಕದಲ್ಲಿ ಖಳನಾಯಕನ ಕ್ರೌರ್ಯದ ಪಾತ್ರಕ್ಕೆ ಜೀವತುಂಬಿ, ಅಭಿನಯಿಸುತ್ತಿರುವಾಗಲೇ ಅದೆಷ್ಟೋ ಜನ ರಂಗ ಸಚಿಕೆಯಲ್ಲಿ ಬಂದು ಬೈದವರುಂಟು, ಅದೆಷ್ಟೋ ಜನ ಕಲ್ಲು ಹೊಡೆದವರುಂಟು, ಇಷ್ಟೊಂದು ಯಶಸ್ವಿ ಪಾತ್ರವನ್ನು ಅಭಿನಯಿಸಲು ಎತ್ತಿದ ಕೈ ನಮ್ಮ ಶ್ರೀ ಎಂ ಎಂ ವಾಲಿಕಾರ ಗುರುಗಳು.             ಇದಷ್ಟೇ ಅಲ್ಲದೆ ಹಲವಾರು ನಾಟಕಗಳನ್ನು ರಚಿಸಿ ತಮ್ಮ ಶಿಷ್ಯರಿಂದಲೇ ಆ ನಾಟಕಗಳನ್ನು ಅಭಿನಯಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ,ನೈತಿಕ ಮೌಲ್ಯಗಳನ್ನು ನೀಡುವ ನಾಟಕ,ರೂಪಕಗಳನ್ನು ರಚಿಸಿ, ತನ್ನೊಳಗೊಬ್ಬ ಎಲೆ ಮರೆಯಕಾಯಿಯ...

ಗೌರವ ಡಾಕ್ಟರೇಟ್ ಪಡೆದ ಎಂ ಎಂ ವಾಲೀಕಾರ ಗೆ ಸನ್ಮಾನ

ಇಮೇಜ್
 ಗೌರವ ಡಾಕ್ಟರೇಟ್ ಪಡೆದ ಎಂ ಎಂ ವಾಲೀಕಾರ ಗೆ ಸನ್ಮಾನ ಇಂಡಿ: ತಾಲೂಕಿನ ತಾಂಬಾ ಗ್ರಾಮದ ಶಾಸಕರ ಸರಕಾರಿ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಎಂ ಎಂ ವಾಲೀಕಾರ ಅವರ ಜೀವನದ ಸಮಗ್ರ ಸಾಧನೆಯನ್ನು ಪರಿಗಣಿಸಿ ಡಾ// ರಾಧಾಕೃಷ್ಣನ್ ವೆಲ್ ಫೇರ್ ಅಸೋಸಿಯೇಷನ್ ಇಂಡಿಯಾ ಇವರ ಶಿಫಾರಸ್ಸಿನ ಮೇರೆಗೆ ಯೂನಿವರ್ಸಿಟಿ ಆಫ್ ಸೆಂಟ್ರಲ್ ಅಮೇರಿಕ ಇವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಿದ್ದಾರೆ.        ಈ ನಿಮಿತ್ತ ಎಂ ಎಂ ವಾಲೀಕಾರ ಅವರಿಗೆ ಅಲ್ತಾಫ್ ಬೋರಾಮಣಿ, ಖಲೀಲ್ ಅತ್ತಾರ, ಕಾಸಿಂ ಮಕಾನದಾರ, ಮುಖ್ತಾರ್ ಅರಬ, ಶಿರಾಜಿ ಮೋಮಿನ್, ಹುಸೇನ್ ಟೇಲರ್, ಶಕೀಲ್ ಪಟೇಲ್ ಸೇರಿದಂತೆ ಅನೇಕರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು