ಪೋಸ್ಟ್‌ಗಳು

ಫೆಬ್ರವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಉರ್ದು ಭಾಷೆ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಲ್ಲ, ಅದು ಒಂದು ಸಂಸ್ಕೃತಿ, ಪರಂಪರೆ ಮತ್ತು ಬೌದ್ಧಿಕ ಪರಂಪರೆಯ ಗುರುತು ಕೂಡಾ ಆಗಿದೆ. ಎಂದು ಜೆಒಸಿಸಿ ಬ್ಯಾಂಕ್ ನಿರ್ದೇಶಕ ಅಲ್ಲಾಹ ಬಕ್ಷ್ ವಾಲೀಕಾರ

ಇಮೇಜ್
 ಇಂಡಿ: ಉರ್ದು ಭಾಷೆ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಲ್ಲ, ಅದು ಒಂದು ಸಂಸ್ಕೃತಿ, ಪರಂಪರೆ ಮತ್ತು ಬೌದ್ಧಿಕ ಪರಂಪರೆಯ ಗುರುತು ಕೂಡಾ ಆಗಿದೆ. ಎಂದು ಜೆಒಸಿಸಿ ಬ್ಯಾಂಕ್ ನಿರ್ದೇಶಕ ಅಲ್ಲಾಹ ಬಕ್ಷ್ ವಾಲೀಕಾರ ಅವರು ಹೇಳಿದರು. ಇಂಡಿ ತಾಲ್ಲೂಕಿನ ಇಂಗಳಿಗಿ ಗ್ರಾಮದ ಸರಕಾರಿ ಉರ್ದು ಶಾಲೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಉರ್ದು ಶಾಲೆಗಳು ಕೇವಲ ಉತ್ತಮ ಶಿಕ್ಷಣ ನೀಡುವ ಸ್ಥಳವಲ್ಲ, ಅವು ವಿದ್ಯಾರ್ಥಿಗಳ ನೈತಿಕ, ಸಾಮಾಜಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ." "ಉರ್ದು ಶಾಲೆಗಳು ನಮ್ಮ ಸಮುದಾಯದ ಮಕ್ಕಳಿಗೆ ಜ್ಞಾನ ಮತ್ತು ಸಾಹಿತ್ಯದ ಬೆಳಕು ಹರಡುತ್ತವೆ. ಇಲ್ಲಿ ಕೇವಲ ಆಧುನಿಕ ಶಿಕ್ಷಣವಲ್ಲ, ವಿದ್ಯಾರ್ಥಿಗಳನ್ನು ಧಾರ್ಮಿಕ, ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೂ ಪರಿಚಯ ಮಾಡಲಾಗುತ್ತದೆ. ಉರ್ದು ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ ಮತ್ತು ಇತರ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಆದ್ದರಿಂದ, ಶಿಕ್ಷಕರು ಮತ್ತು ಗ್ರಾಮಸ್ಥರು ಒಗ್ಗೂಡಿ ಉರ್ದು ಶಾಲೆಗಳ ಉಳಿವಿಗಾಗಿ ಹೋರಾಟ ಮಾಡಬೇಕು. ತಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಅವರನ್ನು ಉರ್ದು ಶಾಲೆಗಳಲ್ಲಿ ಪ್ರವೇಶಿಸಬೇಕು ಎಂದರು.  ಈ ಸಂದರ್...

ಶರಣ ನಾಡಲ್ಲೊಂದು ಪ್ರಪ್ರಥಮ ವೈದ್ಯಸಂಗಮ : ಫೆ.22 ಕ್ಕೆ ವಿಜಯಪುರದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನ

ಇಮೇಜ್
 ಶರಣ ನಾಡಲ್ಲೊಂದು ಪ್ರಪ್ರಥಮ ವೈದ್ಯಸಂಗಮ : ಫೆ.22 ಕ್ಕೆ ವಿಜಯಪುರದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನ ವಿಜಯಪುರ : ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ 31ನೇ ರಾಜ್ಯಮಟ್ಟದ ಸಮ್ಮೇಳನವನ್ನು ಈ ಬಾರಿ ಶರಣ ನಾಡು ವಿಜಯಪುರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಫೆಬ್ರುವರಿ 22 ಮತ್ತು 23 ಎರಡು ದಿನಗಳ ಕಾಲ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬೆಳಿಗ್ಗೆ 12.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಸಿ.ಎಂ.ತಾಳಿಕೋಟಿ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ 30 ವರ್ಷಗಳ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ವಿಜಯಪುರದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲು ಕೇಂದ್ರ ಸಮಿತಿ ಸಮ್ಮತಿಸಿದೆ. ರಾಜ್ಯದ ಯಾವುದೇ ವೈದ್ಯಾಧಿಕಾರಿಗೆ ತೊಂದರೆಯಾದರೆ ಅವರ ಬೆನ್ನಿಗೆ ನಿಂತು ಸಹಕಾರ ನೀಡಿ ಸಮಸ್ಯೆ ಬಗೆಹರಿಸುವ ಹಾಗೂ ವೈದ್ಯಾಧಿಕಾರಿಗಳ ಹಿತಪರ ಸಂಘಟನಾತ್ಮಕವಾಗಿ ಧ್ವನಿಯಾಗಲು ಸಂಘ ರಚಿಸಿಕೊಂಡಿದ್ದೇವೆ ಎಂದರು.  ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದೊಂದು ಜಿಲ್ಲೆ ಆಯ್ಕೆ ಮಾಡಿ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯ ಸಮ್ಮೇಳನ ನಡೆಸಲಾಗುವುದು. ಕಳೆದ 2022 ರ ರಾಜ್ಯ ಸಮ್ಮೇಳನ ತುಮಕೂರಿನಲ್ಲಿ ಹಾಗೂ 2018 ರ ಸಮ್ಮೇಳನ ದಾವಣಗೆರೆಯಲ್ಲಿ ಅಗಿತ್ತು. ...

ನ್ಯಾಯಪ್ರೀಯ ಆಡಳಿತ, ಯುದ್ಧ ತಂತ್ರ ಮತ್ತು ಧರ್ಮ ಸಂಕಲ್ಪ ಇಂದು ಕರ್ನಾಟಕದ ಜನರ ಮನಸ್ಸಿನಲ್ಲಿ ಜೀವಂತವಾಗಿದೆ. ಎಸಿ ಆಬೀದ್ ಗದ್ಯಾಳ

ಇಮೇಜ್
 ಇಂಡಿ: ಯಾರ ಹೆಸರು ಮುಖ್ಯವಲ್ಲ ಸಮಾಜಕ್ಕಾಗಿ ದುಡಿದವರು, ಮನುಷ್ಯ ತನ್ನಷ್ಟಕ್ಕಾಗಿ ತಾನು ಬದುಕಿ ಬಾಳದೆ, ತನ್ನ ಜೀವನದ ಜೋತೆಗೆ ಸಮಾಜದ ಏಳಿಗಾಗಿ ಹಗಲಿರುಳು ದುಡಿದವರ ಆಚಾರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಕಂದಾಯ ಉಪವಿಭಾಗಾಧಿಕಾರಿ ಹಭೀದ ಗದ್ಯಾಳ ಹೇಳಿದರು. ಅವರು ಪಟ್ಟಣದ ಮಿನಿ ವಿಧಾನ ಸಭಾದ ಸಭಾಗೃಹದಲ್ಲಿ ಚತ್ರಪತಿ ಶಿವಾಜಿ ಮಹಾರಾಜರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ನ್ಯಾಯಪ್ರೀಯ ಆಡಳಿತ, ಯುದ್ಧ ತಂತ್ರ ಮತ್ತು ಧರ್ಮ ಸಂಕಲ್ಪ ಇಂದು ಕರ್ನಾಟಕದ ಜನರ ಮನಸ್ಸಿನಲ್ಲಿ ಜೀವಂತವಾಗಿದೆ. ಈಗಲೂ ಕರ್ನಾಟಕದ ಅನೇಕ ಊರುಗಳಲ್ಲಿ ಶಿವಾಜಿ ಮಹಾರಾಜರ ಜಯಂತಿಯನ್ನು ದೊಡ್ಡ ಗೌರವದಿಂದ ಆಚರಿಸಲಾಗುತ್ತಿದೆ ಎಂದರು. ಇAಡಿ ಮತಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಕಾಸುಗೌಡ ಬಿರಾದಾರ ಮಾತನಾಡಿ, ಮೋಘಲರು ಶಿವಾಜಿಯ ಹೆಸರು ಕೆಳಿದರೆ ನಡುಗುತ್ತಿದ್ದರಂತೆ, ಅಂತಹ ಮೋಘಲರ ಆತ್ಮವಿಶಾಸವನ್ನೆ ಅಲ್ಲಾಡಿಸಿದ, ಸೊಕ್ಕನ್ನ ಅಡಗಿಸಿದ ಮತ್ತು ಅವರ ಆಡಳಿತವನ್ನೆ ಅಡಗಿಸಿದ ಪರಾಕ್ರಮಿ, ಅವರ ರಾಜಾಡಳಿತ, ಆಡಳಿತದ ನೈಪುಣ್ಯತೆ, ಯುದ್ದ ಕೌಶ್ಯಲ್ಯತೆ, ಹೊಸದನ್ನು ಸಂಶೋಧಿಸಿ ಬೆರೆ ದೇಶದವರು ಈ ತತ್ವವನ್ನು ಅನುಸರಿಸುವಂತೆ ಮಾಡಿದ್ದು ಶಿವಾಜಿ ಮಹಾರಾಜರು ಒಬ್ಬರು ಎಂದರು.  ಇದೆ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಾವೀದ ಮೊಮೀನ, ಅಯೂಬ ನಾಟಿಕಾರ, ಶ್ರೀಶೈಲಗೌಡ ಪಾಟೀಲ, ಯಮುನಾಜಿ ಸಾಳುಂಕೆ, ಸೋಮ...

ಕತ್ತಲಲ್ಲಿ ಬದಕು ಸಾಗಿಸುತ್ತಿರುವ ರೈತರು! ವಿದ್ಯಾರ್ಥಿಗಳಿಗಿಲ್ಲ ಬೆಳಕಿನ ಭಾಗ್ಯ

ಇಮೇಜ್
  ಕತ್ತಲಲ್ಲಿ ಬದಕು ಸಾಗಿಸುತ್ತಿರುವ ರೈತರು! ವಿದ್ಯಾರ್ಥಿಗಳಿಗಿಲ್ಲ ಬೆಳಕಿನ ಭಾಗ್ಯ  (ಅಲ್ಲಾಬಕ್ಷ.ಧಡೇದ) ತಾಂಬಾ: ಬೇಸಿಗೆ ಪ್ರಾರಂಭವಾದAತೆ ರೈತರು ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಸ್ವಾತಂತ್ರ್ಯ ಬಂದ ೭೩ವರ್ಷಗಳು ಗತಿಸಿಹೋದರು ಇನ್ನುಸಿಕಿಲ್ಲ ನಮ್ಮ ರೈತರ ಮಕ್ಕಳಿಗೆ ಬೆಳಕಲಿ ಕಲ್ಲಿಯು ಯೋಗ ಎಂದು ತಾಂಬಾ ಗ್ರಾಮದ ಹೇಸ್ಕಾಂ ಕಛೇರಿಗೆ ಮುತ್ತಗೆಯನ್ನು ಹಾಕಿ ರಾತ್ರಿವೇಳೆ ಪ್ರತಿಭಟನೆ ಮಾಡಲಾಯಿತ್ತು ತಾಂಬಾ ಗ್ರಾಮದಲ್ಲಿ ೧೦/೩೩ ಕೇವಿ ಹೇಸ್ಕಾಂ ಉಪ ವಿಭಾಗ ಕೆಇಬಿ ಇದ್ದು ಸಂಜೆ ಸಮಯದಲ್ಲಿ ವಿದ್ಯುತ್ತ ಬರುವುದಿಲ್ಲ, ಬಂದರು ದೀಪಕ್ಕಿಂತಲೂ ಕನಿಷ್ಠ ಬಲ್ಪಗಳುಉರಿಯುತ್ತವೆ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಹೇಗೆ ವಿದ್ಯಾಭಾಸವನ್ನು ಮಾಡಬೇಕು ಮಕ್ಕಳ ಭವಿಷ್ಯವನ್ನು ಮುಂದೆನಾಗುತ್ತದೆ ಎಂದು ಪಾಲಕರಲ್ಲಿ ಒಂದು ದೊಡ್ಡ ಪ್ರಶನ್ನೆಆಗಿದೆ. ವಿಜಯಪೂರ ಜಿಲ್ಲೆಯಲ್ಲಿ ಕಳ್ಳರ ಹಾವಳಿ ದಿನೇದಿನೆಜಾಸ್ತಿ ಆಗುತ್ತಲೆ ಇದೆ, ಹೊಲದಲ್ಲಿ ವಾಸಿಸುತ್ತಿರುವ ರೈತರ ಕುಟುಂಬಗಳಲ್ಲಿ ಹೆಣ್ಣು-ಮಕ್ಕಳು, ವಿದ್ಯಾರ್ಥಿಗಳು, ವೃದ್ಧಿಯರು, ಸಂಜೆ ಆದರೆ ಸಾಕುತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗಿಸುವ ಪ್ರಸ್ಥಿತಿ ತಾಂಬಾ ಗ್ರಾಮದಲ್ಲಿ ನಿರ್ಮಾಣವಾಗಿದೆ.  ಹೊಲದಲ್ಲಿ ವಾಸ ಮಾಡುತ್ತಿರುವ ರೈತರ ಬದಕು ಎಷ್ಟೊಂದುಕಷ್ಟ ಆಗಿರುತ್ತದೆ, ಹೇಸ್ಕಾಂ ಅಧಿಕಾರಿಗಳಾಗಲ್ಲಿ, ಸ್ಥಳಿಯ ಶಾಸಕರಾಗಲ್ಲಿ, ಸಚಿವರಾಗಲ್ಲಿ, ರೈತರ ನೋವು ಏನು...

ಶಿವಾಜಿಯ ಮಾತೃಪ್ರೇಮ, ದೇಶಭಕ್ತಿ ಎಲ್ಲರಿಗೂ ಸ್ಪೂರ್ತಿ -ಸಂತೋಷ ಬಂಡೆ

ಇಮೇಜ್
 ಶಿವಾಜಿಯ ಮಾತೃಪ್ರೇಮ, ದೇಶಭಕ್ತಿ ಎಲ್ಲರಿಗೂ ಸ್ಪೂರ್ತಿ -ಸಂತೋಷ ಬಂಡೆ ಇಂಡಿ: ಶಿವಾಜಿಯ ಆದರ್ಶ ವ್ಯಕ್ತಿತ್ವ, ಸಾಹಸ, ದೇಶಪ್ರೇಮದ ಜತೆಗೆ ಅವರ ಜೀವನ ಚರಿತ್ರೆಯನ್ನು ಇಂದಿನ ಪೀಳಿಗೆಗೆ ಪರಿಣಾಮಕಾರಿಯಾಗಿ ಪರಿಚಯಿಸಿ, ಮಕ್ಕಳಲ್ಲಿ ಧೈರ್ಯ, ಸ್ಥೈರ್ಯ, ದೇಶಾಭಿಮಾನ ಮೂಡಿಸಲು ಪ್ರೇರೇಪಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ತಿಳಿಸಿದರು.        ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಬುಧವಾರದಂದು ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.         ಬಲಿಷ್ಠ ಭಾರತ ನಿರ್ಮಾಣದಲ್ಲಿ ಅವಿರತ ಶ್ರಮಿಸಿದವರಲ್ಲಿ ಛತ್ರಪತಿ ಶಿವಾಜಿ ಕೂಡಾ ಒಬ್ಬರು.ಸೇವೆ ಮತ್ತು ಹೋರಾಟದ ಮೂಲಕ ಎಲ್ಲರ ಮನಗೆದ್ದ ಶಿವಾಜಿ ಮಹಾರಾಜರು ಸದ್ಗುಣಗಳ ಸಾಕಾರಮೂರ್ತಿ ಆಗಿದ್ದರು. ಮಹಿಳೆಯರಿಗೆ ಪ್ರಥಮ ಆದ್ಯತೆ ನೀಡಿದ್ದ ಶಿವಾಜಿಯ ಮಾತೃಪ್ರೇಮ, ದೇಶಭಕ್ತಿ ಎಲ್ಲರಿಗೂ ಸ್ಪೂರ್ತಿಯಾಗಿದೆ.        ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ದೇಶದ ಎಲ್ಲ ಧರ್ಮಗಳನ್ನು ಗೌರವಾಧಾರಗಳಿಂದ ಕಾಣುತ್ತಿದ್ದ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ದಕ್ಷ ಆಡಳಿತ ಎಲ್ಲರಿಗೂ ಪ್ರೇರಣೆ. ಭಾರತದ ಸಂಸ್ಕೃತಿ, ಪರಂಪರೆಗೆ ಧಕ್ಕೆಯುಂಟಾದಾಗ ಅದನ್ನು ರಕ್ಷಿಸಿದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದು ತಿಳಿಸಿದರು.     ...

ರಾಷ್ಟ್ರದ ಬೆಳವಣಿಗೆಯಲ್ಲಿ ಯುವಕರ ಪಾತ್ರ ಅನನ್ಯ -ದಯಾನಂದ ಬಿರಾದಾರ

ಇಮೇಜ್
 ರಾಷ್ಟ್ರದ ಬೆಳವಣಿಗೆಯಲ್ಲಿ ಯುವಕರ ಪಾತ್ರ ಅನನ್ಯ -ದಯಾನಂದ ಬಿರಾದಾರ ಇಂಡಿ: ಪಿ ಎಂ ಇಂಟರ್ನ್‌ಶಿಪ್ ಯೋಜನೆಯು 21 ರಿಂದ 24 ವಯಸ್ಸಿನ ಯುವಕರಿಗೆ ಪ್ರಾಯೋಗಿಕ ಅನುಭವವನ್ನು ಪಡೆಯಲು ಮತ್ತು ಅವರ ವೃತ್ತಿ ನಿರೀಕ್ಷೆಗಳನ್ನು ಹೆಚ್ಚಿಸಲು ಒಂದು ಅತ್ಯುತ್ತಮ ಅವಕಾಶವಾಗಿದೆ ಎಂದು ವಿಜಯಪುರದ ಬಿಜ್ಜರಗಿ ಮೋಟಾರ್ಸ್ ನ ಮಾನವ ಸಂಪನ್ಮೂಲ ಅಧಿಕಾರಿ ದಯಾನಂದ ಬಿರಾದಾರ ಹೇಳಿದರು.        ಮಂಗಳವಾರದಂದು ಪಟ್ಟಣದ ಸರಕಾರಿ ಐಟಿಐ ಕಾಲೇಜಿನಲ್ಲಿ ಜಿಲ್ಲೆಯ ಉದ್ದಿಮೆದಾರರು ಮತ್ತು ತರಬೇತುದಾರರಿಗೆ ಹಮ್ಮಿಕೊಂಡ ಪಿ ಎಂ ಇಂಟರ್ನ್‌ಶಿಪ್ ಯೋಜನೆಯ ಕುರಿತು ಅರಿವು ಮೂಡಿಸುವ  ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.       ಈ ಇಂಟರ್ನ್‌ಶಿಪ್ ಯೋಜನೆಯು ಉದ್ಯಮದ ಅನುಭವ, ಕೌಶಲ್ಯ ಅಭಿವೃದ್ಧಿ ಮತ್ತು ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡುವ ಅವಕಾಶ ನೀಡುತ್ತದೆ. ರಚನಾತ್ಮಕ ಕಲಿಕಾ ವಾತಾವರಣದೊಂದಿಗೆ, ಇದು ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಲು ಪರಿಪೂರ್ಣ ಅವಕಾಶವಾಗಿದೆ ಎಂದು ಹೇಳಿದರು.        ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಪಿ ವೈ ರಜನಿಕರ ಮಾತನಾಡಿ, ಇಂದಿನ ಯುವಕರು ವಿವಿಧ ವೃತ್ತಿ ಮತ್ತು ಉದ್ಯೋಗಾವಕಾಶಗಳಲ್ಲಿ ನಿಜ ಜೀವನದ ವ್ಯವಹಾರ ವಾತಾವರಣಕ್ಕೆ ಒಡ್ಡಿಕೊಳ್ಳಬೇಕು. ಈ ಯೋಜನೆಯು ಯುವಕರಿಗೆ ನೈಜ ಪ್ರಪಂಚದ ವ್ಯಾಪಾರ ಪರಿಸರದಲ್ಲಿ ಅಮೂಲ್ಯವಾದ ಕೌಶಲ್ಯ ಮತ್ತು ...

ಯುವಕರು ಉಲಮಾ ಅವರೊಂದಿಗೆ ಸೇರಿ, ಕುರ್’ಆನ್ ಮತ್ತು ಸುನ್ನತ್ತಿನ ಆಧಾರದಲ್ಲಿ ಜೀವನ ನಡೆಸಿ, ಧರ್ಮದ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು:- ಅಬ್ದುಲ್ ಅಝೀಮ್ ಉಮರಿ ಮದನೀ

ಇಮೇಜ್
 ಇಂಡಿ – ಪಟ್ಟಣದ ಉಮರ ಪಂಕಶನ ಹಾಲ್‌ನಲ್ಲಿ ಬಿಜಾಪುರ ಜಿಲ್ಲಾ ಜಮೀಯತ್ ಅಹ್ಲೆ ಹದೀಸ್  ಇವರು ಆಯೋಜಿಸಿದ ಜಿಲ್ಲಾ ಮಟ್ಟದ ಇಸ್ಲಾಮಿಕ ಕ್ವಿಜ್ ಸ್ಪರ್ಧೆ ನಡೆಯಿತು, ಇದರಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಶಾಲೆ ಮತ್ತು ಮದರಸಾಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮದೀನಾ ಮಸೀದ್ ಮದರಸಾ ಹುಂಚ್ಯಾಳ  3 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ದ್ವಿತೀಯ ಸ್ಥಾನ ಪಡೆದ ತಾಳೀಕೋಟ್ ಶೈಫುಲ್ಲಾ ಮದರಸಾದ ವಿದ್ಯಾರ್ಥಿಗಳಿಗೆ ಸೈಕಲ್, ಮತ್ತು ತೃತೀಯ ಸ್ಥಾನ ಪಡೆದ ಮದರಸ ದಾರ್ ಅಲ್ ಅರ್‌ಕಂ ತಾಳೀಕೋಟ್ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ವಾಚ್ ಹಾಗೂ ಪ್ರಾಕ್ಟಿಕಲ್ ಬಾಕ್ಸ್ ಪ್ರಶಸ್ತಿಯಾಗಿ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶೇಖ್ ಅಬ್ದುಲ್ ಅಝೀಮ್ ಉಮರಿ ಮದನೀ ಅವರು ಧಾರ್ಮಿಕ ಶಿಕ್ಷಣದ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳಿಗೆ ಧಾರ್ಮಿಕ ಜ್ಞಾನವನ್ನು ಪಡೆಯಲು ಪ್ರೋತ್ಸಾಹಿಸಿದರು. ಧರ್ಮದ ರಕ್ಷಣೆಯು ಉಲಮಾ ಮತ್ತು ಯುವಕರ ಜವಾಬ್ದಾರಿಯಾಗಿದೆ. ಯುವಕರು ಉಲಮಾ ಜೊತೆಗೂಡಿ ಧರ್ಮ ಸೇವೆಯಲ್ಲಿ ಮುಂದಾಗಬೇಕು. ಇವರು ಆಧುನಿಕ ಯುಗದಲ್ಲಿ ನಿಜವಾದ ಧಾರ್ಮಿಕ ಜ್ಞಾನ ಮತ್ತು ಆಚರಣೆಯ ಅಗತ್ಯವನ್ನು ಪ್ರಸ್ತಾಪಿಸಿ, ಯುವಕರು ಉಲಮಾ ಅವರೊಂದಿಗೆ ಸೇರಿ, ಕುರ್’ಆನ್ ಮತ್ತು ಸುನ್ನತ್ತಿನ ಆಧಾರದಲ್ಲಿ ಜೀವನ ನಡೆಸಿ, ಧರ್ಮದ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಕಾರ್ಯ...

ಯಶಸ್ಸಿಗೆ ನಿರಂತರ ಪರಿಶ್ರಮ, ಬದ್ಧತೆ, ಪ್ರಾಮಾಣಿಕತೆ ಅನಿವಾರ್ಯ ಅತ್ಯಗತ್ಯ. ಯಶಸ್ಸಿಗೆ ಪರಿಶ್ರಮದ ಹೊರತಾದ ಅಡ್ಡಮಾರ್ಗಗಳಿಲ್ಲ ಎಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ

ಇಮೇಜ್
 ಇಂಡಿ: ಯಶಸ್ಸಿಗೆ ನಿರಂತರ ಪರಿಶ್ರಮ, ಬದ್ಧತೆ, ಪ್ರಾಮಾಣಿಕತೆ ಅನಿವಾರ್ಯ ಅತ್ಯಗತ್ಯ. ಯಶಸ್ಸಿಗೆ ಪರಿಶ್ರಮದ ಹೊರತಾದ ಅಡ್ಡಮಾರ್ಗಗಳಿಲ್ಲ ಎಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಹೇಳಿದರು.  ಪಟ್ಟಣದ ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆ ಹಾಗೂ ಪಿ.ಯು ಕಾಲೇಜಿನ ಆಶ್ರಯದಲ್ಲಿ ಜರುಗಿದ ಎಸ್ - ಎಸ್ ಎಲ್ ಸಿ ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳ ಬಿಳ್ಕೊಡುವ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಮಕ್ಕಳ ಸರ್ವಾಂಗೀಣ ವಿಕಾಸವೇ ಶಿಕ್ಷಣದ ಆಶಯ. ಶಿಕ್ಷಣ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವ ಮೂಲಕ ಸಾತ್ವಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿ ದಿಸೆಯಲ್ಲಿ ಒಳ್ಳೆಯ ಗುಣನಡತೆಗಳನ್ನು ರೂಢಿಸಿಕೊಳ್ಳಬೇಕು. ಪ್ರೀತಿ, ತ್ಯಾಗ, ಪರೋಪಕಾರ, ಸತ್ಯ, ನ್ಯಾಯ, ಕರುಣೆ, ಅನುಕಂಪದಂತಹ ಸದ್ಗುಣಗಳನ್ನು ರೂಢಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು. ಬಡತನದಲ್ಲಿ ಹುಟ್ಟಿದ್ದು ತಪ್ಪಲ, ಆದರೆ ಬಡತನದಲ್ಲಿ ಸಾಯುವುದು ತಪ್ಪು, ಬಡತನವನ್ನು ಮೆಟ್ಟಿ ಈ ನಿಲ್ಲಲು ಬಡತನವನ್ನು ಚಾಲೆಂಜಾಗಿ ಸ್ವೀಕಾರ ಮಾಡಬೇಕು. ನಿಮ್ಮಲ್ಲಿರುವ ಬಡತನವನ್ನು ಓಡಿಸುವ ಜೊತೆಗೆ ನಿಮ್ಮ ಸುತ್ತಮುತ್ತಲಿರುವ ಪರಿಸರ, ಪ್ರಕೃತಿಯಲ್ಲಿಯ ಬಡತನ ಓಡಿಸಬೇಕು.  ಪ್ರಾಥಮಿಕ ಪ್ರೌಢ ಹಂತದಲ್ಲಿ ಪಡೆಯುವ ಶಿಕ್ಷಣವು ಮುಂದಿನ ಉನ್ನತ ಭವಿಷ್ಯಕ್ಕೆ ದಾರಿದೀಪವಾಗುತ್ತದೆ. ಜೀವನದಲ್ಲಿ ಒಳ್ಳೆಯ ನಡತೆ, ಇತರ...

ಸಮಸಮಾಜ ಕಟ್ಟುವಲ್ಲಿ ಕಾಯಕ ಶರಣರ ಕೊಡುಗೆ ಅಪಾರ-ಸಂತೋಷ ಬಂಡೆ

ಇಮೇಜ್
 ಸಮಸಮಾಜ ಕಟ್ಟುವಲ್ಲಿ ಕಾಯಕ ಶರಣರ ಕೊಡುಗೆ ಅಪಾರ-ಸಂತೋಷ ಬಂಡೆ ಇಂಡಿ: ಮೂಢನಂಬಿಕೆಗಳು, ಜಾತಿ ಪದ್ಧತಿ, ಅಸಮಾನತೆಯ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.         ಸೋಮವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ ಕಾಯಕ ಶರಣರ ಜಯಂತಿಯನ್ನು ಉದ್ಧೇಶಿಸಿ ಮಾತನಾಡಿದರು.       ಕಾಯಕ ಶರಣರ ವಚನಗಳೇ ನಮ್ಮೆಲ್ಲರ ಬದುಕಿಗೆ  ಸಂವಿಧಾನವಾಗಿದೆ. ಐವರು ಕೂಡ ಜಾತಿ, ಧರ್ಮ, ವರ್ಣ, ವರ್ಗವನ್ನು ಮೀರಿದವರು. ಸರಳ ಜೀವನ, ಶುದ್ಧ ಧ್ಯಾನ, ನಿಷ್ಕಲ್ಮಶ ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯವೆಂದು ಸಾರಿದ ಕಾಯಕ ಶರಣರ ವಚನಗಳು ಇಂದಿಗೂ ಪ್ರಸ್ತುತ ಎಂದರು.        ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದರ ಧೂಳಯ್ಯ, ಢೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರು ತಮ್ಮ ಕಾಯಕದಿಂದ ಗುರುತಿಸಿಕೊಂಡು, ಕಾಯಕದ ಮೇಲೆ ಜಾತಿ ಮಾಡಬಾರದು ಎಂದು ಸಾರಿದ್ದಾರೆ ಎಂದು ಅಭಿಪ್ರಾಯಪಟ್ಟರು.        ಮುಖ್ಯ ಶಿಕ್ಷಕರಾದ ಎಸ್ ಎಸ್ ಅರಬ, ವ್ಹಿ ವೈ ಪತ್ತಾರ ಹಾಗೂ ಶಿಕ್ಷಕರಾದ ಎಸ್ ಎಂ ಪಂಚಮುಖಿ, ಶಾಂತೇಶ ಹಳಗುಣಕಿ, ಮಲ್ಲಮ್ಮ ಗಿರಣಿವಡ್...

ಮಕ್ಕಳ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಪೋಷಕರು ಮತ್ತು ಶಿಕ್ಷಕರ ಪ್ರಮುಖ ಜವಾಬ್ದಾರಿ. ಅಬೀದ ಗದ್ಯಾಳ

ಇಮೇಜ್
 ಇಂಡಿ. ಉಮ್ಮೆ ಸುಲೇಮ್ ಮಸೀದಿ ಮತ್ತು ಮದರಸಾ ವತಿಯಿಂದ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು  ಸಮಾರಂಭವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಇಂಡಿ ಉಪ ವಿಭಾಗಾಧಿಕಾರಿಗಳಾದ ಆಭೀದ ಗದ್ಯಾಳ ಅವರು ಮಾತನಾಡಿ, "ಇಂದಿನ ಯುಗದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಸರಿಯಾದ ದಾರಿಯನ್ನು ತೋರಿಸುವುದು ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಅತ್ಯಗತ್ಯ.  "ಮಕ್ಕಳ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಪೋಷಕರು ಮತ್ತು ಶಿಕ್ಷಕರ ಪ್ರಮುಖ ಜವಾಬ್ದಾರಿ, ಏಕೆಂದರೆ ಶಿಕ್ಷಣಯುಕ್ತ ಸಮಾಜವೊಂದೇ ಪ್ರಗತಿಯ ದಾರಿಯಲ್ಲಿ ಸಾಗಲು ಸಾಧ್ಯ" ಎಂದರು ಹೇಳಿದರು. ಈ ಸಂದರ್ಭ ಮೌಲಾನಾ ನೂರುದ್ದೀನ್ ಉಮರಿ ಅವರು ವಿದ್ಯಾರ್ಥಿಗಳ ಶಿಸ್ತುಬದ್ಧ ಜೀವನ ಮತ್ತು ಶಿಕ್ಷಕರ ಗೌರವದ ಮಹತ್ವದ ಕುರಿತು ಮಾತನಾಡಿದರು. "ಯಶಸ್ಸಿಗಾಗಿ ಕೇವಲ ಶೈಕ್ಷಣಿಕ ಪ್ರಗತಿಯೇ ಸಾಕಾಗದು  ನೈತಿಕ ಬೆಳೆಸುವಿಕೆಯೂ ಮುಖ್ಯವಾಗಿದೆ. ಶಿಕ್ಷಕರ ಗೌರವಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಜವಾಬ್ದಾರಿ, ಏಕೆಂದರೆ ಒಬ್ಬ ಉತ್ತಮ ಶಿಕ್ಷಕವೇ ಉತ್ತಮ ಪೀಳಿಗೆ ನಿರ್ಮಿಸಬಲ್ಲನು. ಈ ಸಮಾರಂಭದಲ್ಲಿ ಹಾಫಿಝ್, ಡಾಕ್ಟರ್, ಇಂಜಿನಿಯರ್ ಆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪೋಷಕರು, ಶಿಕ್ಷಕರು ಮತ್ತು ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಭವಿಷ್ಯ...

ಇಂಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಶಹಿನಶಾ ಜಾಗೀರದಾರ ಆಯ್ಕೆ.

ಇಮೇಜ್
 ಇಂಡಿ. ಇತ್ತೀಚೆಗೆ ರಾಜ್ಯದಲ್ಲಿ ನಡೆದ  ಕರ್ನಾಟಕ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಶಹಿನಶಾ ಜಾಗೀರದಾರ 128 ಮತಗಳ ಪಡೆಯುವ ಮೂಲಕ ಇಂಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಶಹಿನಶಾ ಜಾಗೀರದಾರ ಇವರು ಆಯ್ಕೆಯಾಗಿದ್ದಾರೆ.  ನನ್ನ ರಾಜಕೀಯ ಜೀವನದಲ್ಲಿ ಗೆಲುವು ನೀಡಿ ನನಗೆ ಇಂಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಗದ್ದುಗೆ  ನೀಡಿದ್ದಕ್ಕೆ  ಯುವ ಮತದಾರರಿಗೆ  ಪ್ರೀತಿಯ ಧನ್ಶವಾಗಳು.  ಚುನಾವಣೆಯಲ್ಲಿ ಅಭೂತಪೂರ್ವ  ಮತಗಳ ಮೂಲಕ ಸಮಾಜಕ್ಕೆ ಉತ್ತಮ  ಕೆಲಸವನ್ನು  ಮಾಡುವ  ಹೂಸ ಆತ್ಮ ವಿಶ್ವಾಸ ಮೂಡಿದೆ  ಎಂದು ಯುವ ಮತದಾರರಿಗೆ ಧನ್ಯವಾದಗಳು ತಿಳಿಸಿದರು. ಹಾಗೂ  ನನ್ನ ರಾಜಕೀಯ ಜೀವನದಲ್ಲಿ  ನನ್ನ  ಮಾರ್ಗದರ್ಶಕರಾಗಿರುವ  ಇಂಡಿ ವಿಧಾನ ಸಭಾ ಕ್ಷೇತ್ರ ಶಾಸಕ ಯಶವಂತರಾಯಗೌಡ ಪಾಟೀಲ್ ಸಾಹೇಬರ  ಸದಾ ಚಿರಋಣಿ  ಎಂದರು.

ನಿರಂತರ ಯೋಗಾಭ್ಯಾಸದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ-ಬಿ ಎಸ್ ಪಾಟೀಲ

ಇಮೇಜ್
 ನಿರಂತರ ಯೋಗಾಭ್ಯಾಸದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ-ಬಿ ಎಸ್ ಪಾಟೀಲ ಇಂಡಿ: ಯೋಗವು ಮಕ್ಕಳಲ್ಲಿ ಮಾನಸಿಕ, ಆಧ್ಯಾತ್ಮಿಕ, ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಬೆಳೆಸಿ, ಸಕಾರಾತ್ಮಕ ಆರೋಗ್ಯಕರ ಜೀವನವನ್ನು ಉತ್ತೇಜಿಸುತ್ತದೆ ಎಂದು ಯೋಗ ಶಿಕ್ಷಕ ಬಿ ಎಸ್ ಪಾಟೀಲ ಹೇಳಿದರು.          ಶನಿವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ 'ಅಂಗೈಯಲ್ಲಿ ಆರೋಗ್ಯ-ಯೋಗ ಕಾರ್ಯಕ್ರಮ' ಉದ್ಘಾಟಿಸಿ ಮಾತನಾಡಿದರು.           ನಿರಂತರ ಯೋಗಾಭ್ಯಾಸವು ಮಕ್ಕಳಲ್ಲಿ ಆತ್ಮವಿಶ್ವಾಸ, ಉತ್ತಮ ಸಂವಹನ, ತಂಡ ಮನೋಭಾವದ ಮೌಲ್ಯಗಳನ್ನು ಹೆಚ್ಚಿಸುತ್ತದೆ. ಯೋಗದಿಂದ ರೋಗ ನಿರೋಧಕ ಶಕ್ತಿ ಕೂಡ ಬಲಗೊಳ್ಳುತ್ತದೆ ಎಂದು ಹೇಳಿದರು.          ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಯೋಗ ಪದ್ಧತಿ ಭಾರತದ ಆಸ್ತಿ, ಭಾರತವು ವಿಶ್ವಕ್ಕೆ ಯೋಗದ ಮೂಲಕ ಶಾಂತಿಯನ್ನು ರಫ್ತು ಮಾಡಿದೆ. ಯೋಗದಿಂದ ಮಕ್ಕಳಲ್ಲಿ ಶಕ್ತಿ, ಸಹಿಷ್ಣುತೆ, ಆತ್ಮವಿಶ್ವಾಸ ಬೆಳೆಯುತ್ತದೆ. ಜತೆಗೆ ಮಕ್ಕಳಿಗೆ ಶಿಸ್ತುಬದ್ಧ ಜೀವನ ರೂಢಿಸುತ್ತದೆ ಎಂದು ಹೇಳಿದರು.       ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಆಧುನಿಕ ಜೀವನ ಪದ್ಧತಿಯಲ್ಲಿ ಒತ್ತಡ ಹಾಗೂ ಆಹಾರ ಪದ್ಧತಿಯಿಂದಾಗಿ ದೇಹ ಸದೃಢವಾಗಿರಲು ಸಾಧ್ಯವಾಗುತ್ತಿಲ್ಲ. ಪೂರ್ಣ ಆಯಸ...

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಮೇಜ್
 ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ ಇಂಡಿ. ಇಂದಿಗೂ ಗಣಿತ ಮತ್ತು ಉರ್ದು ಶಿಕ್ಷಣದ ಪ್ರಸಿದ್ಧ ತಜ್ಞ, ಇಂಡಿಯ ಅಂಜುಮನ್ ಟಿ.ಟಿ.ಐ ಕಾಲೇಜಿನ ಮಾಜಿ ಪ್ರಿನ್ಸಿಪಾಲ್ ಪ್ರೊಫೆಸರ್ ಎಸ್.ಎಂ.ಎಫ್. ಮುಖ್ತಿಯಾರ್ ಸರ್  ಅವರು ಬೆಂಗಳೂರಿನಲ್ಲಿ ಇಂದು ನಿಧನರಾಗಿದ್ದಾರೆ. ಅವರು ಅನುಭವಸಂಪನ್ನ ಶಿಕ್ಷಕರಾಗಿದ್ದರು, ಶ್ರೇಷ್ಠ ಆಡಳಿತಗಾರರಾಗಿದ್ದರು ಮತ್ತು ಅನೇಕ ಗುರುಗಳ ಮಾರ್ಗದರ್ಶಕರಾಗಿದ್ದರು. ಪ್ರೊಫೆಸರ್ ಮುಖ್ತಿಯಾರ್ ಅವರು ತಮ್ಮ ಜೀವನದ ಮಹತ್ತರ ಭಾಗವನ್ನು ಗಣಿತ ಮತ್ತು ಉರ್ದು ಶಿಕ್ಷಣದ ಪ್ರಚಾರಕ್ಕಾಗಿ ಮೀಸಲಾಗಿಟ್ಟಿದ್ದರು. ಅವರು ಇಂಡಿಯ ಅಂಜುಮನ್ ಟಿ.ಟಿ.ಐ ಕಾಲೇಜಿನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿದರು. ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳದ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕಿನಲ್ಲಿ ಅವರ ಶಿಷ್ಯರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದ ಅವರ ಶಿಕ್ಷಣ ಪರಂಪರೆಯ ಮಹತ್ವವನ್ನು ಅರಿಯಬಹುದು. ಮೃತರು ಇಂಡಿ ನಗರದಲ್ಲಿ ಹಲವಾರು ಸೇವಾ ಕಾರ್ಯಗಳನ್ನು ನಿರ್ವಹಿಸಿದ್ದರು. ಅವರು ಪ್ರತಿಯೊಬ್ಬರೊಂದಿಗೆ ಪ್ರೀತಿ, ಸ್ನೇಹ ಮತ್ತು ನ್ಯಾಯತ್ಮಕತೆಯೊಂದಿಗೆ ವರ್ತಿಸುತ್ತಿದ್ದರು. ಅವರು ಮಾಡಿದ ಸೇವೆಗಳು ಅಪಾರವಾಗಿವೆ. ಅವರ ನಿಧನದಿಂದ ಶಿಕ್ಷಣ ಜಗತ್ತಿನಲ್ಲಿ ದೊಡ್ಡ ನಷ್ಟಯಾಗಿದ್ದು, ಅದನ್ನು ಭರ್ತಿ ಮಾಡುವುದು  ಅಸಾಧ್ಯ. ಅವರ ಅಗಲಿಕೆಯ ಬಗ್ಗೆ ...

ರೂಗಿ ಗ್ರಾಮ ಪಂಚಾಯಿತಿಗೆ ರಾಜ್ಯ ಮಟ್ಟದ ಅತ್ಯುತ್ತಮ ಗ್ರಾಮ ಪಂಚಾಯಿತಿ ಪುರಸ್ಕಾರ ಪ್ರದಾನ

ಇಮೇಜ್
 ರೂಗಿ ಗ್ರಾಮ ಪಂಚಾಯಿತಿಗೆ ರಾಜ್ಯ ಮಟ್ಟದ ಅತ್ಯುತ್ತಮ ಗ್ರಾಮ ಪಂಚಾಯಿತಿ ಪುರಸ್ಕಾರ ಪ್ರದಾನ ಇಂಡಿ: ತಾಲೂಕಿನ ರೂಗಿ ಗ್ರಾಮ ಪಂಚಾಯತಿಗೆ ಸನ್ 2023-24ನೇ ಸಾಲಿನ ನರೇಗಾ ಯೋಜನೆಯ 'ರಾಜ್ಯ ಮಟ್ಟದ ಅತ್ಯುತ್ತಮ ಗ್ರಾಮ ಪಂಚಾಯತಿ ಪ್ರಶಸ್ತಿ' ದೊರಕಿದೆ.        ಸನ್ 2023-24ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅತ್ಯುತ್ತಮ ಕಾಮಗಾರಿಗಳನ್ನು ಅನುಷ್ಠಾನ ಮಾಡಿದ ಫಲವಾಗಿ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದ್ದು, ದಿನಾಂಕ: 05.02.2025ರಂದು ಬೆಂಗಳೂರಿನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜರುಗಿದ ನರೇಗಾ ಹಬ್ಬ-2025 ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.      ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ಸೊಮವ್ವ ಯಶವಂತ ಹೊಸಮನಿ, ತಾಪಂ ಸಹಾಯಕ ನಿರ್ದೇಶಕರಾದ ಸಂಜಯ ಖಡಗೇಖರ, ಗ್ರಾಪಂ ಪಿಡಿಒ ಬಸವರಾಜ ಬಬಲಾದ, ಟಿಐಇಸಿ ರಾಮನಗೌಡ ಸರಬಡಗಿ, ತಾಂತ್ರಿಕ ಸಹಾಯಕರಾದ ಈರಣ್ಣ ಇಂಡಿ ಸೇರಿದಂತೆ ಇತರರು ಹಾಜರಿದ್ದರು.

ಜಿ.ಎಸ್.ಕುಲಕರ್ಣಿ ಶಾಂತೇಶ್ವರ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಪದಗ್ರಹಣ

ಇಮೇಜ್
 ಜಿ.ಎಸ್.ಕುಲಕರ್ಣಿ ಶಾಂತೇಶ್ವರ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಪದಗ್ರಹಣ ಇಂಡಿ: ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಮತ್ತು ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳ ಜೀವನಕ್ಕೆ ಆಧಾರ ಕಲ್ಪಿಸುವ ವೃತ್ತಿಪರ ಕೋರ್ಸಗಳನ್ನು ಪ್ರಾರಂಭಿಸಲು ಹೊಸ ಕ್ರಿಯಾ ಯೋಜನೆಯನ್ನು ರೂಪಿಸುವದಾಗಿ ಸಂಸ್ಥೆಯ ನೂತನ ಅಧ್ಯಕ್ಷ ಜಿ.ಎಸ್. ಕುಲಕರ್ಣಿ ವಕೀಲರು ಹೇಳಿದರು. ತಾಲೂಕಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾ ವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಖ್ಯಾತ ವಕೀಲರಾದ ಜಿ. ಎಸ್. ಕುಲಕರ್ಣಿಯವರು ಅಧಿಕಾರ ಪದಗ್ರಹಣ ಮಾಡಿ ಮಾತನಾಡಿದರು.  ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ಗೌ.ಕಾರ್ಯದರ್ಶಿ ಪ್ರಭಾಕರ ಬಗಲಿ, ಖಜಾಂಚಿ ಸಿದ್ದಣ ತಾಂಬೆ, ಸದಸ್ಯರಾದ ಭೀಮನಗೌಡ ಪಾಟೀಲ, ಸಾತಪ್ಪ ತೆನಿಹಳ್ಳಿ, ವರ್ಧನ ದೋಶಿ ಉಪಸ್ಥಿತರಿದ್ದರು. ಸಭೆಯಲ್ಲಿ ಶಾಂತಗೌಡ ಬಿರಾದಾರ, ರಾಜುಗೌಡ ಬಿರಾದಾರ, ಪ್ರದೀಪ ದೋಶಿ, ರವಿಗೌಡ ಪಾಟೀಲ, ಹಾಗು ಸಂಸ್ಥೆಯಡಿಯಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳ ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಡಾಕ್ಟರ್, ಇಂಜಿನಿಯರ್, ವಿಜ್ಞಾನಿ ಆಗಲು ಬಹಳ ಸ್ಪರ್ಧೆ ಎದುರಿಸಬೇಕಾಗುತ್ತದೆ. ಆದರೆ ಒಬ್ಬ ಒಳ್ಳೆಯ ಮನುಷ್ಯನಾಗಲು ಯಾವುದೇ ಸ್ಪರ್ಧೆ ಇಲ್ಲ ಎಂದು ಇಂಡಿ ಉಪ ವಿಭಾಗಾಧಿಕಾರಿಗಳಾದ ಆಬೀದ ಗದ್ಯಾಳ ಹೇಳಿದರು.

ಇಮೇಜ್
 ಇಂಡಿ: ಡಾಕ್ಟರ್, ಇಂಜಿನಿಯರ್, ವಿಜ್ಞಾನಿ ಆಗಲು ಬಹಳ ಸ್ಪರ್ಧೆ ಎದುರಿಸಬೇಕಾಗುತ್ತದೆ. ಆದರೆ ಒಬ್ಬ ಒಳ್ಳೆಯ ಮನುಷ್ಯನಾಗಲು ಯಾವುದೇ ಸ್ಪರ್ಧೆ ಇಲ್ಲ ಎಂದು ಇಂಡಿ ಉಪ ವಿಭಾಗಾಧಿಕಾರಿಗಳಾದ ಆಬೀದ ಗದ್ಯಾಳ ಹೇಳಿದರು.  ನಗರದ ಪ್ರಸಿದ್ದ  ಶಿಕ್ಷಣ ಸಂಸ್ಥೆ ರಾಯಲ್ ಇಂಟರ್ ನ್ಯಾಷನಲ್ ಸ್ಕೂಲ್‌ ವಾರ್ಷಿಕ  ಸ್ನೇಹ ಸಮ್ಮೇಳನದ ಉದ್ಘಾಟಿಸಿದ ನಂತರ ಮಾತನಾಡಿದರು. "ಮನುಷ್ಯ ಒಂದು ಅಂತಹ ಯಂತ್ರ, ಅದಕ್ಕೆ ಸಮಾನವಾದ ಇನ್ನೊಂದು ಯಂತ್ರ ಇಲ್ಲ." ದೇವರು ಮನುಷ್ಯನಿಗೆ ಅದ್ಭುತ ಶಕ್ತಿ, ಸಾಮರ್ಥ್ಯ ಮತ್ತು ತಂತ್ರಜ್ಞಾನವನ್ನು ನೀಡಿದ್ದಾರೆ, ಅದು ಇತರ ಯಾವ ಯಂತ್ರದಲ್ಲಿಯೂ ಇಲ್ಲ. ನಮಗೆ ಈ ಶಕ್ತಿ ನೀಡಿರುವ ದೇವರಿಗೆ ಕೃತಜ್ಞರಾಗಬೇಕು.  ಮತ್ತು ಈ ಶಕ್ತಿಯ ಸರಿಯಾದ ಬಳಕೆ ಮಾಡಿ ಗಗನಮಂಡಲದ ಎತ್ತರವನ್ನು ತಲುಪಬೇಕು. ಇಂದು ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ನೈತಿಕತೆ ಹಾಗೂ ಉತ್ತಮ ಶಿಕ್ಷಣ ನೀಡುವ ಮೂಲಕ ಒಳ್ಳೆಯ ವ್ಯಕ್ತಿತ್ವ ನಿರ್ಮಿಸಬೇಕು. "ಮಕ್ಕಳ ಭವಿಷ್ಯ ನಿರ್ಮಾಣವಾಗುವುದು ಗುಣಮಟ್ಟದ ಶಿಕ್ಷಣದ ಮೂಲಕವೇ." ಈ ಜಗತ್ತಿನಲ್ಲಿ ಬದುಕಲು ಶಿಕ್ಷಣದ ಅಗತ್ಯವಿದೆ, ಆದರೆ ಉತ್ತಮ ಜೀವನಕ್ಕಾಗಿ ಸಂಸ್ಕೃತಿಯೂ ಅಗತ್ಯವಾಗಿದೆ. ಜೀವನ ಅಮೂಲ್ಯವಾದ್ದು. ಅದರಲ್ಲಿ ತಪ್ಪುಗಳಾಗಬಹುದು, ಆದರೆ ಅವುಗಳನ್ನು ಸರಿಪಡಿಸಿಕೊಂಡು ಮುಂದುವರಿಯಬೇಕು. ಯಶಸ್ಸು ಅವಶ್ಯಕ. ಆದರೆ ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನ ಇಲ್ಲದೆ ಅದನ್ನು ಸಾಧಿಸಲಾಗದು. ತಂದೆ-ತಾಯಿ ಮತ್...

ರಸ್ತೆ ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ-ಮಹೇಶ ಸಂಖ

ಇಮೇಜ್
 ರಸ್ತೆ ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ-ಮಹೇಶ ಸಂಖ ಇಂಡಿ: ಇತ್ತೀಚಿನ ದಿನಗಳಲ್ಲಿ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವದರಿಂದ ರಸ್ತೆ ಸುರಕ್ಷತೆಯು ಬಹಳ ಮುಖ್ಯವಾಗಿದ್ದು, ನಾವು ಸಂಚಾರ ನಿಯಮ ಮತ್ತು ಕಾನೂನುಗಳನ್ನು ಅನುಸರಿಸಿದಾಗ ನಮ್ಮ ಕುಟುಂಬಗಳನ್ನು ರಸ್ತೆ ಅಪಘಾತಗಳಿಂದ ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಇಂಡಿ ಗ್ರಾಮೀಣ ಪಿ ಎಸ್ ಐ ಮಹೇಶ ಸಂಖ ಹೇಳಿದರು.        ಮಂಗಳವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಗಳ ವತಿಯಿಂದ ಹಮ್ಮಿಕೊಂಡ 'ರಸ್ತೆ ಸುರಕ್ಷತೆ-ಕಾನೂನು ಅರಿವು ಕಾರ್ಯಕ್ರಮ'ವನ್ನು ಉದ್ಘಾಟಿಸಿ ಆವರು ಮಾತನಾಡಿದರು.          18 ವರ್ಷದೊಳಗಿನ ಮಕ್ಕಳು ವಾಹನ ಚಾಲನೆ ಮಾಡುವುದು ಅಪರಾಧವಾಗಿದ್ದು, ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.        ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ರಸ್ತೆ ಸುರಕ್ಷತೆಯು ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ರಸ್ತೆ ಸುರಕ್ಷತೆ ನಿಯಮಗಳು ಮತ್ತು ಕ್ರಮಗಳ ಬಗ್ಗೆ ಚೆನ್ನಾಗಿ ಅರಿವು ಮೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.        ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ಷಣಾತ್ಮ...

ಮಾಚಿದೇವರ ತತ್ವಾದರ್ಶ ಸರ್ವಕಾಲಕ್ಕೂ ಅನ್ವಯ

ಇಮೇಜ್
 ಮಾಚಿದೇವರ ತತ್ವಾದರ್ಶ ಸರ್ವಕಾಲಕ್ಕೂ ಅನ್ವಯ ಇಂಡಿ.  ೧೨ ನೇ ಶತಮಾನದಲ್ಲಿ ಹಿಂದುಳಿದ ಹಾಗೂ ಶ್ರಮಜೀವಿಗಳ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವರು ಒಬ್ಬರು. ಆಧ್ಯಾತ್ಮಿಕ ಪ್ರವೃತ್ತಿಯ ಮೂಲಕ ಜನರಲ್ಲಿ ಭಕ್ತಿ ಪ್ರಧಾನ ಚಿಂತನೆಗಳನ್ನು ಮೂಡಿಸಿದ ಮಾಚಿದೇವರ ತತ್ವಾದರ್ಶಗಳು ಸರ್ವಕಾಲಕ್ಕೂ ಅನ್ವಯ ಎಂದು ಕಂದಾಯ ಉಪವಿಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಹಮ್ಮಿಕೊಂಡ  ಮಡಿವಾಳ ಮಾಚಿದೇವರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಕಲ್ಯಾಣ ಕ್ರಾಂತಿಯ ಕೊನೆಯ ಘಟ್ಟದ ಹೋರಾಟದಲ್ಲಿ ಮಾಚಿದೇವರು ತಮ್ಮ ಪರಾಕ್ರಮದಿಂದ ವಚನ ಸಾಹಿತ್ಯ ಉಳಿಸುವಲ್ಲಿ ಅನುಪಮ ಸೇವೆಗೈದಿದ್ದಾರೆ. ಮಡಿವಾಳ ಮಾಚಿದೇವರು ಮನದ ಮೈಲಿಗೆ ಕಳೆದ ಸರ್ವ ಶ್ರೇಷ್ಠ ಶರಣ, ದಿಟ್ಟ ಗಣಾಚಾರಿ ಎಂದು ಹೇಳಿದರು. ಸಮಾಜದ ಧುರೀಣ ಅಗಸರ ಮಾತನಾಡಿ, ಮೇಲು ಕೀಳು, ಬಡವರು,ಸಾಮಾಜಿಕ ಬಹಿಷ್ಕಾರ ಹಾಗೂ ಶೋಷಣೆಗೊಳಗಾದವರ ಬಗ್ಗೆ  ಚಿಂತಿಸಿ, ವ್ಯಕ್ತಿ-ವ್ಯಕ್ತಿಗಳ ನಡುವೆ ಇರುವ ಅಂತರವನ್ನು ಹೋಗಲಾಡಿಸಲು ಹೋರಾಡಿದ ಮಾಚಿದೇವರ ಜೀವನ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಹೇಳಿದರು. ಗ್ರೇಡ್ ೨ ತಹಸೀಲ್ದಾರ ಧನಪಾಲಶೆಟ್ಟಿ ದೇವೂರ, ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ  ಬಸವರಾಜ ರಾಹೂರ, ಎಸ್.ಆರ್.ಮುಜಗೊಂಡ, ಸಂತೋಷ ಮ್ಯಾಕೇರಿ, ವೀಣಾ ಕೋಳುರಗಿ, ಬಸವರಾಜ ಬಿರಾದಾರ,  ಶ್ರೀಮತಿ ಎಸ್,ಎನ್,ಕೊಡತೆ, ಸಂ...

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ISRO ವಿಜ್ಞಾನಿ ವಿಲಾಸ್ ರಾಠೋಡ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು

ಇಮೇಜ್
 ರಾಯಲ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ, ISRO ವಿಜ್ಞಾನಿ ವಿಲಾಸ್ ರಾಠೋಡ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಇಂಡಿ: ನಗರದ ಪ್ರಸಿದ್ಧ ಶಿಕ್ಷಣ ಸಂಸ್ಥೆ ರಾಯಲ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಅದ್ಭುತ ವಿಜ್ಞಾನ ಪ್ರದರ್ಶನವನ್ನು ಆಯೋಜಿಸಲಾಯಿತು. ಈ ವಸ್ತು ಪ್ರದರ್ಶನವನ್ನು ಇಂಡಿ ತಾಲ್ಲೂಕಿನ ISRO ಪ್ರಖ್ಯಾತ ವಿಜ್ಞಾನಿ ವಿಲಾಸ್ ರಾಠೋಡ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿಯ ರಹಸ್ಯವು ಸಂಶೋಧನೆ, ಪ್ರಾಯೋಗಿಕತೆ ಮತ್ತು ಸೃಜನಾತ್ಮಕ ಚಿಂತನೆಯಲ್ಲಿ ಅಡಗಿದೆ ಎಂದು ಹೇಳಿದರು. ಈ ವಿಜ್ಞಾನ ಪ್ರದರ್ಶನವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಭವವನ್ನು ನೀಡುವ ಜೊತೆಗೆ, ಅವರಲ್ಲಿ ವಿಜ್ಞಾನ ಮತ್ತು ಸಂಶೋಧನೆಗೆ ಒಲವು ಹೆಚ್ಚಿಸುವಲ್ಲಿ ಸಹಾಯಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ರಾಯಲ್ ಇಂಟರ್ನ್ಯಾಷನಲ್ ಶಾಲೆಯ ಈ ಅದ್ಭುತ ಪ್ರಯತ್ನವನ್ನು ಎಲ್ಲೆಡೆಯಿಂದ ಪ್ರಶಂಸಿಸಲಾಗುತ್ತಿದ್ದು, ಇದು ಖಂಡಿತವಾಗಿಯೂ ವಿದ್ಯಾರ್ಥಿಗಳ ಭವಿಷ್ಯದ ದೃಢ ಭಿತ್ತಿಯಾಗಿ ನಿಲಿಯುತ್ತದೆ. ವಿಲಾಸ್ ರಾಠೋಡ್ ಅವರು ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಆವಿಷ್ಕಾರ ಸಾಮರ್ಥ್ಯವನ್ನು ಮೆಚ್ಚಿ, ಈ ಯುವಕರು ಭವಿಷ್ಯದ ವಿಜ್ಞಾನಿಗಳು ಆಗಲಿದ್ದಾರೆ, ಅವರು ನಮ್ಮ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ಹೇಳಿದರು. ಈ ವಿಜ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು